ವಿಶ್ವ ದರ್ಜೆಯ ಚೆನಾನಿ-ನಾಶ್ರಿ ಸುರಂಗದ ವೈಶಿಷ್ಟ್ಯಗಳೇನು? 10 ಪಾಯಿಂಟ್ಸ್

Published : Apr 02, 2017, 11:54 AM ISTUpdated : Apr 11, 2018, 12:58 PM IST
ವಿಶ್ವ ದರ್ಜೆಯ ಚೆನಾನಿ-ನಾಶ್ರಿ ಸುರಂಗದ ವೈಶಿಷ್ಟ್ಯಗಳೇನು? 10 ಪಾಯಿಂಟ್ಸ್

ಸಾರಾಂಶ

ಇನ್'ಫ್ರಾಸ್ಟ್ರಕ್ಚರ್ ಲೀಸಿಂಗ್ ಅಂಡ್ ಫೈನಾನ್ಷಿಯಲ್ ಸರ್ವಿಸಸ್ (IL&FS) ಎಂಬ ಸಂಸ್ಥೆಯು ಕೇವಲ ಐದೂವರೆ ವರ್ಷದಲ್ಲಿ ಸುರಂಗ ನಿರ್ಮಿಸಿದೆ.

ನವದೆಹಲಿ(ಏ. 02): ಪ್ರಧಾನಿ ಮೋದಿ ಭಾನುವಾರ ಉದ್ಘಾಟನೆ ಮಾಡಿರುವ ಚೆನಾನಿ-ನಾಶರಿ ಸುರಂಗ ಅನೇಕ ಕಾರಣಗಳಿಂದ ಗಮನ ಸೆಳೆದಿದೆ. ಇದು ಭಾರತದ ಅತಿ ಉದ್ದದ ಸುರಂಗ ಮಾರ್ಗವೆಂಬ ಹೆಗ್ಗಳಿಕೆ ಹೊಂದಿದೆ. ಜೊತೆಗೆ ಇದಕ್ಕೆ ಇನ್ನೂ ಹಲವು ವೈಶಿಷ್ಟ್ಯಗಳಿವೆ.

ಚೆನಾನಿ-ನಾಶ್ರೀ ಸುರಂಗದ ವೈಶಿಷ್ಟ್ಯಗಳು:

* ಹಿಮಾಲಯ ಕಣಿವೆಯ ಅತ್ಯಂತ ದುರ್ಗಮ ಮಾರ್ಗದಲ್ಲಿ ಅತ್ಯಂತ ಚಾಕಚಕ್ಯತೆಯಿಂದ ನಿರ್ಮಾಣ

* ದ್ವಿಮುಖ ಪಥದವಿರುವ ಈ ಸುರಂಗದ ಉದ್ದ 9.2 ಕಿ.ಮೀ. ಇದು ಭಾರತದಲ್ಲೇ ಅತೀ ಉದ್ದದ ಸುರಂಗ ಮಾರ್ಗವೆನಿಸಿದೆ.

* ಈ ಸುರಂಗದಿಂದಾಗಿ ಚೆನಾನಿ ಮತ್ತು ನಾಶರಿ ನಡುವಿನ ರಸ್ತೆ ಮಾರ್ಗವು 10.9 ಕಿಮೀಗೆ ಇಳಿಯುತ್ತದೆ. ಸುರಂಗವಿಲ್ಲದಿದ್ದರೆ ಪ್ರಯಾಣಿಕರು ಇವೆರಡು ಸ್ಥಳಗಳ ನಡುವೆ ಪ್ರಯಾಣಿಸಲು 41 ಕಿಮೀ ಸಾಗಬೇಕಿತ್ತು.

* ಸುರಂಗವು ಸಮುದ್ರ ಮಟ್ಟದಿಂದ 1200 ಮೀಟರ್(4,000 ಅಡಿ) ಎತ್ತರದಲ್ಲಿದೆ.

* ವಿಶ್ವ ದರ್ಜೆಯ "ಇಂಟಿಗ್ರೇಟೆಡ್ ಟನೆಲ್ ಕಂಟ್ರೋಲ್ ಸಿಸ್ಟಂ" ಹೊಂದಿರುವ ಭಾರತದ ಮೊದಲ ಸುರಂಗ ಮಾರ್ಗ ಇದಾಗಿದೆ. ಸೌರ ಬೆಳಕಿನ ವ್ಯವಸ್ಥೆ, ಅಗ್ನಿ ಅವಘಡ ನಿಯಂತ್ರಣ, ಸಿಗ್ನಲ್, ಕಮ್ಯೂನಿಕೇಶನ್, ವಿದ್ಯುತ್ ಮೊದಲಾದವನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸಲಾಗಿದೆ.

* ಕಣಿವೆ ರಾಜ್ಯದ ಪ್ರಮುಖ ನಗರಗಳಾದ ಜಮ್ಮು ಮತ್ತು ಶ್ರೀನಗರ ನಡುವಿನ ಪ್ರಯಾಣ ಅವಧಿ ಎರಡೂವರೆ ಗಂಟೆಯಷ್ಟು ಕಡಿಮೆಯಾಗಲಿದೆ. ಇದರಿಂದ ಪ್ರತೀ ದಿನ ಸುಮಾರು 28 ಲಕ್ಷ ರೂಪಾಯಿ ಉಳಿತಾಯವಾಗಲಿದೆ ಎಂಬ ಲೆಕ್ಕಾಚಾರವೊಂದಿದೆ.

* ಜಮ್ಮು-ಶ್ರೀನಗರ ನಡುವಿನ 286 ಕಿಮೀ ಚತುಷ್ಪಥ ಹೆದ್ದಾರಿ ಯೋಜನೆಯ ಒಂದು ಭಾಗವಾಗಿರುವ ಈ ಸುರಂಗದ ನಿರ್ಮಾಣಕ್ಕೆ ತಗುಲಿರುವ ವೆಚ್ಚ 3,720 ಕೋಟಿ ರೂ.

* ಇನ್'ಫ್ರಾಸ್ಟ್ರಕ್ಚರ್ ಲೀಸಿಂಗ್ ಅಂಡ್ ಫೈನಾನ್ಷಿಯಲ್ ಸರ್ವಿಸಸ್ (IL&FS) ಎಂಬ ಸಂಸ್ಥೆಯು ಕೇವಲ ಐದೂವರೆ ವರ್ಷದಲ್ಲಿ ಸುರಂಗ ನಿರ್ಮಿಸಿದೆ.

* ಹೆಚ್ಚೇನು ಮರ ಕಡಿಯದೇ ನಿರ್ಮಿಸಿರುವ ಸುರಂಗವು ವರ್ಷಾದ್ಯಂತ ಯಾವುದೇ ಹವಾಮಾನದಲ್ಲೂ ಬಳಕೆಯೋಗ್ಯವಾಗುಂತೆ ವ್ಯವಸ್ಥೆ ಹೊಂದಿದೆ.

* ಮುಖ್ಯ ಸುರಂಗದ ಪಕ್ಕದಲ್ಲೇ ಮತ್ತೊಂದು ಸುರಂಗ ನಿರ್ಮಿಸಲಾಗಿದೆ. ಪ್ರತೀ 300 ಮೀಟರ್'ಗೂ ಇವೆರಡು ಸುರಂಗಗಳಿಗೆ ಜೋಡಿಕೆಯಾಗಿ ಕ್ರಾಸ್ ಪ್ಯಾಸೇಜ್'ಗಳನ್ನು ನಿರ್ಮಿಸಲಾಗಿದೆ. ಅಪಾಯದ ಸಂದರ್ಭ ಎದುರಾದಾಗ ಮುಖ್ಯ ಸುರಂಗದಿಂದ ಪರ್ಯಾಯ ಸುರಂಗಕ್ಕೆ ಬದಲಾಯಿಸಿಕೊಳ್ಳಲು ಅವಕಾಶವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು