ರಾಹುಲ್ ಗಾಂಧಿಗೆ ನಾಳೆ ಮಹಾಪರೀಕ್ಷೆ..!

Published : Dec 17, 2017, 08:06 AM ISTUpdated : Apr 11, 2018, 01:13 PM IST
ರಾಹುಲ್ ಗಾಂಧಿಗೆ ನಾಳೆ ಮಹಾಪರೀಕ್ಷೆ..!

ಸಾರಾಂಶ

ಹೊಸ ಹುದ್ದೆ ಸ್ವೀಕರಿಸಿದ ಬೆನ್ನಲ್ಲೇ, ರಾಹುಲ್ ಮೊದಲ ಅಗ್ನಿಪರೀಕ್ಷೆಗೂ ಒಳಪಡಬೇಕಾಗಿ ಬಂದಿದೆ. ಕಾರಣ, ರಾಹುಲ್ ಅಧ್ಯಕ್ಷರಾಗಲಿದ್ದಾರೆ ಎಂಬ ಸುದ್ದಿಗಳ ನಡುವೆ ಭಾರೀ ಪೈಪೋಟಿಯ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಈ ಚುನಾವಣೆ ಗೆಲ್ಲಲು ರಾಹುಲ್ ಸಾಕಷ್ಟು ಕಾರ್ಯತಂತ್ರ ಕೂಡಾ ರೂಪಿಸಿದ್ದರು.

ನವದೆಹಲಿ(ಡಿ.17): ಕಾಂಗ್ರೆಸ್‌'ನ 16ನೇ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಶನಿವಾರ ಅಧಿಕಾರ ಸ್ವೀಕರಿಸಿದರು. ಇದರೊಂದಿಗೆ 132 ವರ್ಷ ಇತಿಹಾಸವುಳ್ಳ ಕಾಂಗ್ರೆಸ್‌'ನಲ್ಲಿ ಹೊಸ ಯುಗವೊಂದು ಆರಂಭವಾದಂತಾಯಿತು.

ಹೊಸ ಹುದ್ದೆ ಸ್ವೀಕರಿಸಿದ ಬೆನ್ನಲ್ಲೇ, ರಾಹುಲ್ ಮೊದಲ ಅಗ್ನಿಪರೀಕ್ಷೆಗೂ ಒಳಪಡಬೇಕಾಗಿ ಬಂದಿದೆ. ಕಾರಣ, ರಾಹುಲ್ ಅಧ್ಯಕ್ಷರಾಗಲಿದ್ದಾರೆ ಎಂಬ ಸುದ್ದಿಗಳ ನಡುವೆ ಭಾರೀ ಪೈಪೋಟಿಯ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಈ ಚುನಾವಣೆ ಗೆಲ್ಲಲು ರಾಹುಲ್ ಸಾಕಷ್ಟು ಕಾರ್ಯತಂತ್ರ ಕೂಡಾ ರೂಪಿಸಿದ್ದರು. ಇದರ ಹೊರತಾಗಿಯೂ ಚುನಾವಣಾಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಗೆಲುವಿನ ಸುಳಿವು ನೀಡಿವೆ. ಸೋಮವಾರ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ಹೊಸ ಹುದ್ದೆ ವಹಿಸಿಕೊಂಡ ಆರಂಭದಲ್ಲೇ ರಾಹುಲ್ ಸಾಮರ್ಥ್ಯ ಒರೆಗೆ ಹಚ್ಚುವುದು ಖಚಿತವಾಗಲಿದೆ. ಒಂದು ವೇಳೆ ಈ ಚುನಾವಣೆಯಲ್ಲಿ ಬಿಜೆಪಿಗೆ ಸ್ವಲ್ಪವೇ ಸ್ವಲ್ಪ ಹೊಡೆತ ಬಿದ್ದರೂ, ಅದು ರಾಹುಲ್ ಪಾಲಿಗೆ ಬಹುದೊಡ್ಡ ಗೆಲುವಾಗಲಿದೆ.

ಒಂದು ವೇಳೆ ಬಿಜೆಪಿ ತನ್ನ ಸಾಮರ್ಥ್ಯ ವೃದ್ಧಿಸಿ ಕೊಂಡರೆ ಅದು ರಾಹುಲ್ ಸಾಮರ್ಥ್ಯದ ಮುಂದೆ ಮತ್ತೊಂದು ಪ್ರಶ್ನಾರ್ಥಕ ಚಿಹ್ನೆಯನ್ನು ಒಡ್ಡಲಿದೆ. ಹೀಗಾಗಿ ಸೋಮವಾರ ರಾಹುಲ್ ಪಾಲಿಗೆ ಬಹುದೊಡ್ಡ ದಿನವಾಗಲಿದೆ. ರಾಹುಲ್ ಗಾಂಧಿ 2004ರಿಂದ ಚುನಾವಣಾ ರಾಜಕೀಯಕ್ಕೆ ಧುಮುಕಿ 2007ರಿಂದ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2013 ರಿಂದ ಪಕ್ಷದ ಉಪಾಧ್ಯಕ್ಷರಾಗಿದ್ದರು. ಇನ್ನು ಸೋನಿಯಾ ಕಳೆದ 19 ವರ್ಷಗಳಿಂದ ಪಕ್ಷವನ್ನು ಆಳುತ್ತಿದ್ದರು.

ಯುವಕರಿಗೆ ಮಣೆ: ಪಕ್ಷದ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಹಲವು ಹಿರಿಯ ತಲೆಗಳಿಗೆ ಪಕ್ಷದ ಉನ್ನತ ಹುದ್ದೆಯಿಂದ ಕೊಕ್ ನೀಡಿ ಯುವಕರಿಗೆ ಮಣೆ ಹಾಕಿದ್ದ ರಾಹುಲ್, ಇದೀಗ ಯುವ ಸಮೂಹಕ್ಕೆ ಇನ್ನಷ್ಟು ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಇದುವರೆಗೆ ಸೋನಿಯಾ ಆಪ್ತ ವಲಯದಲ್ಲಿ ಹಲವು ವರ್ಷಗಳಿಂದ ಕಾಣಿಸಿಕೊಂಡಿದ್ದ ನಾಯಕರಿಗೆ ಕೊಕ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಿಂದ ರಾಮೇಶ್ವರ, ಮಧುರೈ, ಕನ್ಯಾಕುಮಾರಿಗೆ IRCTC ಟೂರ್ ಪ್ಯಾಕೇಜ್; ₹10 ಸಾವಿರಕ್ಕೆ 5 ದಿನದ ಪ್ರವಾಸ!
ಸ್ಪೇಸ್‌ಎಕ್ಸ್‌ ತಂದ ಅದೃಷ್ಟ, ರಾತ್ರೋರಾತ್ರಿ 10 ಕೋಟಿಯ ಒಡೆಯನಾದ ಕಂಪನಿಯ ಸಾಮಾನ್ಯ ವೆಲ್ಡರ್‌