ಕರ್ನಾಟಕ ಬಂದ್: ಏನಿರುತ್ತೆ..? ಏನಿರೋದಿಲ್ಲ..? ಇಲ್ಲಿದೆ ಡೀಟೇಲ್ಸ್

Published : Sep 08, 2016, 09:52 AM ISTUpdated : Apr 11, 2018, 12:55 PM IST
ಕರ್ನಾಟಕ ಬಂದ್: ಏನಿರುತ್ತೆ..? ಏನಿರೋದಿಲ್ಲ..? ಇಲ್ಲಿದೆ ಡೀಟೇಲ್ಸ್

ಸಾರಾಂಶ

ಬೆಂಗಳೂರು(ಸೆ.09): ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಸೆ.9 ರಂದು ಸುಮಾರು 1300 ಹೆಚ್ಚು ಸಂಘಟನೆಗಳು ಕರ್ನಾಟಕ ಬಂದ್’ಗೆ ಬೆಂಬಲ ಸೂಚಿಸಿವೆ.

ಪೆಟ್ರೋಲ್ ಬಂಕ್'ಗಳು ಬಾಗಿಲು ತೆರೆಯುವುದಿಲ್ಲ. ಬೆಳಿಗ್ಗೆ 6 ಗಂಟೆಯಿಂದಲೇ ಕೆಎಸ್'ಆರ್'ಟಿಸಿ ಬಸ್ ಸಂಚಾರ ಸ್ಥಗಿತಗೊಳ್ಳುವುದರೊಂದಿಗೆ, ಬ್ಯಾಂಕ್ ಸೇವೆಯೂ ಲಭ್ಯವಿರುವುದಿಲ್ಲ. ಆಸ್ಪತ್ರೆ, ಮೆಡಿಕಲ್ ಶಾಪ್, ಌಂಬ್ಯುಲೆನ್ಸ್ ಕಾರ್ಯ ನಿರ್ವಹಿಸಲಿವೆ, ಹಾಲು, ಪೇಪರ್, ತರಕಾರಿ, ಅಗತ್ಯವಸ್ತುಗಳು ಸಿಗಲಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಬಂದ್'ಗೆ ಬೆಂಬಲ ನೀಡಿದ ಸಂಘಟನೆಗಳು
- ರೈತಪರ ಸಂಘಟನೆಗಳು
- ಬಿಬಿಎಂಪಿಯ 198 ಸದಸ್ಯರು ಬಾಹ್ಯ ಬೆಂಬಲ
- ಖಾಸಗಿ ಶಾಲಾ-ಕಾಲೇಜುಗಳ ಮಂಡಳಿಗಳು
- ಸರ್ಕಾರೀ ಶಾಲಾ-ಕಾಲೇಜುಗಳು ಬಂದ್
- ರಾಜ್ಯ ಒಕ್ಕಲಿಗರ ಸಂಘದಿಂದ ಬೆಂಬಲ
- ಹೊಟೇಲ್ ಮಾಲೀಕರ ಸಂಘದಿಂದ ಬಂಬಲ
- ಇಡೀ ಕನ್ನಡ ಚಿತ್ರೋದ್ಯಮ
- ವಿವಿಧ ಕಾರ್ಮಿಕ ಸಂಘಟನೆಗಳು
- ವಿವಿಧ ಕನ್ನಡ ಪರ ಸಂಘಟನೆ,
- ಲಾರಿ ಮಾಲೀಕರ ಸಂಘ,
- ಟ್ಯಾಕ್ಸಿ, ಕ್ಯಾಬ್ ಸಂಘಟನೆಗಳು,
- ಕನ್ನಡ ಸಾಹಿತ್ಯ ಪರಿಷತ್​,
- ಕಲಾವಿದರು ಸಂಘಟನೆ
- ಐಟಿ-ಬಿಟಿ ಕಂಪೆನಿಗಳು
- ಕೇಬಲ್ ಆಪರೇಟರ್ಸ್ ಅಸೋಸಿಯೇಷನ್
- ವರ್ತಕರ ಸಂಘಟನೆಗಳು
- ಬ್ಯಾಂಕ್​ ನೌಕರರ ಸಂಘಟನೆಗಳು

ಏನೇನು ಇರೋದಿಲ್ಲ :
-ಬಿಎಂಟಿಸಿ-ಕೆಎಸ್​ಆರ್​ಟಿಸಿ ಬಸ್ ಸೌಲಭ್ಯ ಸ್ಥಗಿತ
-ನಮ್ಮ ಮೆಟ್ರೋ ಸ್ಥಗಿತ
-ಆಟೋ, ಟ್ಯಾಕ್ಸಿ, ಕ್ಯಾಬ್ ಸ್ಥಗಿತ
-ಹೊಟೇಲ್'ಗಳು ಬಂದ್
-ಚಲನಚಿತ್ರ ಪ್ರದರ್ಶನ ಇರುವುದಿಲ್ಲ
-ಶಾಲಾ ಕಾಲೇಜುಗಳು ಬಂದ್
-ಮಾಲ್, ಮಾರುಕಟ್ಟೆ, ಸಂಪೂರ್ಣ ಬಂದ್
-ಪೆಟ್ರೋಲ್ ಬಂಕ್'ಗಳು ಕಾರ್ಯ ನಿರ್ವಹಿಸುವುದಿಲ್ಲ
-ಬ್ಯಾಂಕ್, ಅಂಚೆ ಕಚೇರಿ, ವಿಮೆ ಸೇವೆಗಳು ಸ್ಥಗಿತ
-ಕಾಮೆಡ್ ಕೆ ಕೌನ್ಸೆಲಿಂಗ್ ಇರುವುದಿಲ್ಲ

ಬಂದ್​ನಿಂದ ವಿನಾಯ್ತಿ :
-ರೈಲು ಸಂಚಾರ
-ಆಸ್ಪತ್ರೆಗಳು, ಆಂಬುಲೆನ್ಸ್
-ಮೆಡಿಕಲ್ ಷಾಪ್​ಗಳು ಕಾರ್ಯ ನಿರ್ವಹಿಸಲಿವೆ
-ಹಾಲು, ದಿನಪತ್ರಿಕೆಗಳು ಲಭ್ಯ

ಜನಸಾಮಾನ್ಯರು ಏನು ಮಾಡಬೇಕು
- ಇದು ನಮಗೆ, ನಮ್ಮ ರೈತರಿಗೆ ಆಗಿರುವ ಅನ್ಯಾಯ. ಶಾಂತಿಯುತವಾಗಿ ಖಂಡನೆ ವ್ಯಕ್ತಪಡಿಸೋಣ. ಅನ್ಯಾಯಕ್ಕೆ ಸಾತ್ವಿಕ ಪ್ರತಿಭಟನೆ ತೋರೋಣ. ಬೆಂಗಳೂರಿನ ಜನ ಆಚೆ ಬಂದು ತಮ್ಮ ಖಂಡನೆ ವ್ಯಕ್ತಪಡಿಸಬೇಕು.
- ಸಾರ್ವಜನಿಕರ ಆಸ್ತಪಾಸ್ತಿಗಳಿ ಹಾನಿ ಮಾಡಬೇಡಿ.
- ಇನ್ನು ಮಕ್ಕಳು, ವೃದ್ಧರು, ರೋಗಿಗಳು ಮನೆಯಿಂದ ಹೊರಗೆ ಬರಬೇಡಿ.
- ಪ್ರಯಾಣ ಮುಂದೂಡಿಕೊಳ್ಳುವುದು ಉತ್ತಮ.
- ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗುವುದನ್ನು ಮುಂದೂಡಿಕೊಳ್ಳಿ.
- ಎಟಿಎಂನಲ್ಲಿ ಹಣ ತೆಗೆಯೋದು ಅಥವಾ ಬ್ಯಾಂಕ್ ವಹಿವಾಟು ಇಂದೇ ಮುಗಿಸಿಕೊಳ್ಳಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯಪುರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 5 ಎಕರೆ ಕಬ್ಬು, ಟ್ರೈಲರ್ ಬೆಂಕಿಗಾಹುತಿ! ರೈತ ಕಣ್ಣೀರು
ಜನವರಿ 1, 2026 ರಿಂದ 10 ನಿಯಮಗಳಲ್ಲಿ ಬದಲಾವಣೆ, ಸಂಬಳ-ಪಡಿತರ ಮೇಲೆ ನೇರ ಪರಿಣಾಮ