
ತಿರುಪತಿ(ಏ.7): ಅಪನಗದೀಕರಣಗೊಂಡ ನೋಟುಗಳ ವಿನಿಮಯಕ್ಕೆ ಕೊನೆಯ ದಿನಾಂಕ ಮುಕ್ತಾಯದ ಬಳಿಕವೂ ತಿರುಪತಿ ದೇವಸ್ಥಾನದ ಹುಂಡಿಗೆ ಭಕ್ತಾದಿಗಳು 15 ಕೋಟಿ ವೌಲ್ಯದ ಹಳೇ ನೋಟುಗಳನ್ನು ಹಾಕಿದ್ದಾರೆ. ಹಾಗಾಗಿ, ಈ ನೋಟುಗಳ ವಿನಿಮಯಕ್ಕೆ ನೀಡಲಾಗಿದ್ದ ಡಿ.30ರ ಗಡುವು ಮುಕ್ತಾಯಗೊಂಡಿದ್ದು, ಹಳೇ ನೋಟುಗಳ ಭವಿಷ್ಯವೇನು ಎಂಬುದನ್ನು ತಿಳಿಸುವಂತೆ ಕೋರಿ ಕೇಂದ್ರ ಮತ್ತು ಆರ್ಬಿಐಗೆ ತಿರುಮಲ ತಿರುಪತಿ ದೇವಸ್ಥಾನಂ ಪತ್ರ ಬರೆದಿದ್ದು, ಈ ಕುರಿತು ಅವುಗಳ ಪ್ರತ್ಯುತ್ತರದ ನಿರೀಕ್ಷೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಕಳೆದ 3 ತಿಂಗಳ ಅವಯಲ್ಲಿ ಹೊಸ ಮತ್ತು ಅಪನಗದೀಕರಣಗೊಂಡ ಹಳೇ ನೋಟುಗಳನ್ನು ಭಕ್ತಾದಿಗಳು ಹುಂಡಿಗೆ ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.