ಊಬರ್ ಚಾಲಕನ ಮೇಲೆ ನೈಜಿರಿಯನ್ ಪ್ರಜೆಗಳಿಂದ ಹಲ್ಲೆ

Published : Apr 07, 2017, 05:09 PM ISTUpdated : Apr 11, 2018, 12:49 PM IST
ಊಬರ್ ಚಾಲಕನ ಮೇಲೆ ನೈಜಿರಿಯನ್ ಪ್ರಜೆಗಳಿಂದ ಹಲ್ಲೆ

ಸಾರಾಂಶ

ದಾರಿಯಲ್ಲಿ ಹುಡುಗಿ ಸೇರಿದಂತೆ ಮತ್ತೆ ಮೂವರು ಕಾರಿಗೆ ಹತ್ತಿದ್ದಾರೆ. ಹೋಗಬೇಕಾದ ಸ್ಥಳವನ್ನು ಬಿಟ್ಟು ಬೇರೆಡೆ ಕರೆದೊಯ್ದಿದ್ದರು

ಬೆಂಗಳೂರು(ಏ.07): ಊಬರ್​ ಕ್ಯಾಬ್​ನ್ನು ಬುಕ್​ ಮಾಡಿ ಊಬರ್​ ಚಾಲಕನಿಗೆ ನೈಜೀರಿಯನ್​ ಪ್ರಜೆಗಳು  ಹಲ್ಲೆ  ನಡೆಸಿದ ಘಟನೆ ಬೆಂಗಳೂರಿನ ಕೆ ಆರ್​ ಪುರಂನಲ್ಲಿ ನಡೆದಿದೆ.

ನೆನ್ನೆ ತಡರಾತ್ರಿ ಚಾಲಕ ಸಂತೋಷ್​ ಹೊಸೂರ್​ ಬಂಡೆ ಬಳಿ ಜೀಫ್​ ಎಂಬ ನೈಜೀರಿಯನ್​ ಪ್ರಜೆಯನ್ನ ಪಿಕ್​ ಅಪ್​ ಮಾಡಿದ್ದ. ನಂತರ ದಾರಿಯಲ್ಲಿ ಹುಡುಗಿ ಸೇರಿದಂತೆ ಮತ್ತೆ ಮೂವರು ಕಾರಿಗೆ ಹತ್ತಿದ್ದಾರೆ. ಹೋಗಬೇಕಾದ ಸ್ಥಳವನ್ನು ಬಿಟ್ಟು ಬೇರೆಡೆ ಕರೆದೊಯ್ದಿದ್ದರು. ಹೀಗೆ ಸುಮಾರು 22 ಕಿಲೋಮೀಟರ್​ ಸುತ್ತಾಡಿಸಿದ್ದಾರೆ.  ಅದೂ ಅಲ್ಲದೆ ಕ್ಯಾಬ್​ ನಲ್ಲಿ ಕುಡಿದಿದ್ದು ಅದನ್ನ ಪ್ರಶ್ನಿಸಿದಕ್ಕೆ ಹಲ್ಲೆಯನ್ನ ನಡೆಸಿದರು. ಅದಾದ ಬಳಿಕ ಭಟ್ಟರಹಳ್ಳಿಗೆ ಬಂದು ತಮ್ಮ ಮನೆ ಬಳಿ ಬಂದಾಗ ಕ್ಯಾಬ್​ನ ಸೀಟಿನಲ್ಲಿ ಬಿಯರ್​ಗಳನ್ನು ಚೆಲ್ಲಿದ್ದರೂ ಅದೂ ಅಲ್ಲದೆ ಹಣ ಕೇಳಿದಕ್ಕೆ ಮತ್ತೆ ಹಲ್ಲೆ ನಡೆಸಿ ಅಲ್ಲಿಂದ ಹೊರ ಬಿದ್ದಿದ್ರು. ಈ  ಸಂಬಂಧ ಸಂತೋಷ್​ ಕೆ.ಆರ್.​ ಪುರಂ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ
ಸಿಲ್ಕ್ ಬೋರ್ಡ್- ಕೆ.ಆರ್ ಪುರ ಮೆಟ್ರೋ ನಿಲ್ದಾಣದವರೆಗೂ ಹೈಟೆಕ್ ಹೊರವರ್ತುಲ ರಸ್ತೆ ಅಭಿವೃದ್ಧಿಗಾಗಿ ₹307 ಕೋಟಿ ಅನುಮೋದನೆ