ಪ್ರವಾಹ ಪೀಡಿತ ಕಾಜಿರಂಗ ವನ್ಯದಿಂದ ತಪ್ಪಿಸಿಕೊಂಡ ಹುಲಿ ಮನೆಯಲ್ಲಿ ವಿಶ್ರಾಂತಿ!

Published : Jul 19, 2019, 09:17 AM IST
ಪ್ರವಾಹ ಪೀಡಿತ ಕಾಜಿರಂಗ ವನ್ಯದಿಂದ ತಪ್ಪಿಸಿಕೊಂಡ ಹುಲಿ ಮನೆಯಲ್ಲಿ ವಿಶ್ರಾಂತಿ!

ಸಾರಾಂಶ

 ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಶೇ.5ರಷ್ಟುಭಾಗ ಜಲಾವೃತಗೊಂಡು ಪ್ರಾಣಿಗಳು ಚೆಲ್ಲಾಪಿಲ್ಲಿ| ಪ್ರವಾಹ ಪೀಡಿತ ಕಾಜಿರಂಗ ವನ್ಯದಿಂದ ತಪ್ಪಿಸಿಕೊಂಡ ಹುಲಿ ಮನೆಯಲ್ಲಿ ವಿಶ್ರಾಂತಿ| 

ನವದೆಹಲಿ[ಜು.19]: ಭಾರೀ ಪ್ರಮಾಣದ ಮುಂಗಾರು ಮಳೆಯಿಂದ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಶೇ.5ರಷ್ಟುಭಾಗ ಜಲಾವೃತಗೊಂಡು ಪ್ರಾಣಿಗಳು ಚೆಲ್ಲಾಪಿಲ್ಲಿಯಾದ ಬೆನ್ನಲ್ಲೇ, ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಎದುರಾದ ಭಾರೀ ಪ್ರವಾಹಕ್ಕೆ ತತ್ತರಿಸಿದ ಹುಲಿಯೊಂದು ರಕ್ಷಿತಾರಣ್ಯದ ಪಕ್ಕದಲ್ಲೇ ಇರುವ ಮನೆಯೊಂದಕ್ಕೆ ಲಗ್ಗೆ ಇಟ್ಟಿದೆ.

ಭಾರತದ ವನ್ಯಜೀವಿ ಟ್ರಸ್ಟ್‌ ಟ್ವೀಟ್‌ ಮಾಡಿದ ಈ ಫೋಟೋದಲ್ಲಿ ಮನೆಯೊಳಕ್ಕೆ ನುಗ್ಗಿರುವ ವ್ಯಾಘ್ರವೊಂದು ಬೆಡ್‌ ಮೇಲೆ ರಿಲ್ಯಾಕ್ಸ್‌ ಮೂಡ್‌ನಲ್ಲಿರುವಂತೆ ಗೋಚರಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದೆ.

ಅಲ್ಲದೆ, ಕತ್ತಲಾಗುವವರೆಗೂ ಕಾದು ಆ ಬಳಿಕ ಮನೆಯ ಬೆಡ್‌ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಹುಲಿಗೆ ಕಾಡಿಗೆ ಬಿಡಲಾಗುತ್ತದೆ ವೈಲ್ಡ್‌ಲೈಫ್‌ ಟ್ರಸ್ಟ್‌ ಆಫ್‌ ಇಂಡಿಯಾ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎವಿಆರ್ ರೆಡ್ಡಿ ಸ್ಯಾಂಡಲ್‌ವುಡ್‌ ನಟಿಯ ಗಲಾಟೆಯಲ್ಲಿ ಬಿಗ್ ಟ್ವಿಸ್ಟ್, ಬೆದರಿಕೆ ಪತ್ರ ಬರೆದ ಗೆಳೆಯ ಅರೆಸ್ಟ್!
ನೆರೆ ರಾಜ್ಯದಲ್ಲಿ ಕಾಗೆಗಳ ಸರಣಿ ಸಾವಿನ ಆಘಾತಕಾರಿ ಸತ್ಯ ಪರೀಕ್ಷೆಯಲ್ಲಿ ಬಯಲು, ಜನರಲ್ಲಿ ಆತಂಕ