ಪರಾರಿ ಯತ್ನಿಸುತ್ತಿದ್ದ ದಾವೂದ್‌ ಅಣ್ಣನ ಮಗ ಮುಂಬೈನಲ್ಲಿ ಬಂಧನ!

Published : Jul 19, 2019, 09:05 AM IST
ಪರಾರಿ ಯತ್ನಿಸುತ್ತಿದ್ದ ದಾವೂದ್‌ ಅಣ್ಣನ ಮಗ ಮುಂಬೈನಲ್ಲಿ ಬಂಧನ!

ಸಾರಾಂಶ

ಪರಾರಿ ಯತ್ನ ವೇಳೆ ದಾವೂದ್‌ ಅಣ್ಣನ ಮಗ ಮುಂಬೈ ಏರ್ಪೋ​ರ್ಟ್‌ಲ್ಲಿ ಪೊಲೀಸ್‌ ಬಲೆ​ಗೆ| ದಾವೂದ್‌ ಇಬ್ರಾ​ಹಿಂ ಸಂಬಂಧಿ ರಿಜ್ವಾನ್‌ ಕಸ್ಕ​

ಮುಂಬೈ[ಜು.19]: ಸುಲಿಗೆ ಪ್ರಕ​ರ​ಣ​ವೊಂದಕ್ಕೆ ಸಂಬಂಧಿ​ಸಿ​ದಂತೆ ಭೂಗತ ಪಾತ​ಕಿ ದಾವೂದ್‌ ಇಬ್ರಾ​ಹಿಂ ಸಂಬಂಧಿ ರಿಜ್ವಾನ್‌ ಕಸ್ಕ​ರ್‌ನನ್ನು ಬುಧ​ವಾರ ತಡ​ರಾತ್ರಿ ಮುಂಬೈ ಪೊಲೀ​ಸರು ವಿಮಾನ ನಿಲ್ದಾ​ಣ​ದಲ್ಲಿ ಬಂಧಿಸಿದ್ದಾರೆ.

ದಾವೂದ್‌ನ ಸೋದರ ಇಕ್ಬಾಲ್‌ ಕಸ್ಕ​ರ್‌ನ ಮಗನೇ ಈ ರಿಜ್ವಾ​ನ್‌. 2017ರಲ್ಲಿ ಮುಂಬೈನ ಉದ್ಯ​ಮಿ​ಯನ್ನು ಬೆದ​ರಿಸಿ ಸುಲಿಗೆ ಮಾಡಿದ್ದ ಪ್ರಕ​ರ​ಣ​ವೊಂದರ ವಿಚಾ​ರಣೆ ವೇಳೆ ಹಲ​ವರ ಹೆಸ​ರು​ಗಳು ಬೆಳ​ಕಿಗೆ ಬಂದಿ​ದ್ದವು. ಅವ​ರೆ​ಲ್ಲ​ರನ್ನೂ ವಿಚಾ​ರ​ಣೆಗೆ ಒಳ​ಪ​ಡಿ​ಸಿ​ದಾಗ ರಿಜ್ವಾನ್‌ ಹೆಸರು ಕೇಳಿ​ಬಂದಿತ್ತು.

ಇದ​ನ್ನ​ರಿತ ರಿಜ್ವಾನ್‌ ದೇಶ ತೊರೆದು ಓಡಿ​ಹೋ​ಗಲು ಮುಂಬೈನ ಅಂತಾ​ರಾಷ್ಟ್ರೀಯ ವಿಮಾನ ನಿಲ್ದಾ​ಣಕ್ಕೆ ತೆರ​ಳಿದ್ದಾಗ ಅಲ್ಲಿಗೆ ತೆರ​ಳಿದ ಪೊಲೀ​ಸರು ರಿಜ್ವಾ​ನ್‌​ನನ್ನು ವಶಕ್ಕೆ ಪಡೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಸಿದ್ದರಾಮಯ್ಯರಿಂದ ರಾಜ್ಯದ ದಲಿತರ ಸರ್ವನಾಶ: ಮಾಜಿ ಸಂಸದ ಪ್ರತಾಪ್ ಸಿಂಹ
Karnataka News Live:4 ವರ್ಷಗಳ ಬಳಿಕ ಕೊನೆಗೂ ಜಿಪಂ, ತಾಪಂಗಳಿಗೆ ಏಪ್ರಿಲಲ್ಲಿ ಎಲೆಕ್ಷನ್