
ಹೈದರಾಬಾದ್(ಮೇ.18): ರಿಪಬ್ಲಿಕ್ ಸುದ್ದಿ ವಾಹಿನಿ ಐಸಿಸ್ ಉಗ್ರರ ಇಂಟರ್ ವ್ಯೂ ಮಾಡಿ ಸುದ್ದಿ ಪ್ರಸಾರ ಮಾಡಿದ್ದೇ ತಡ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ಸುದ್ದಿ ಪ್ರಸಾರ ಮಾಡಿದ 30 ಗಂಟೆಗಳಲ್ಲೇ ಹೈದರಾಬಾದ್ ಪೊಲೀಸರು ಮೂವರು ಐಸಿಸ್ ಉಗ್ರರನ್ನು ಬಂಧಿಸಿದ್ದಾರೆ.
ರಿಪಬ್ಲಿಕ್ ಟಿವಿಯ ಕರ್ನಾಟಕ ಮೂಲದ ವರದಿಗಾರ್ತಿ ಪ್ರೇಮಾ ರಹಸ್ಯ ಕಾರ್ಯಾಚರಣೆ ನಡೆಸಿ ಐಸಿಸ್ ಏಜಂಟರ ಬಗ್ಗೆ ವರದಿ ಪ್ರಸಾರ ಮಾಡಿದ್ದೇ ತಡ ಕೇಂದ್ರ ಗೃಹ ಇಲಾಖೆ ಎಚ್ಚೆತ್ತುಕೊಂಡಿದೆ. ಈ ಸುದ್ದಿ ಪ್ರಸಾರವಾಗಿ ಮೂವತ್ತು ಗಂಟೆಯಲ್ಲೇ ಸಲ್ಮಾನ್ ಮೊಹಿಯುದ್ದೀನ್, ಅಬ್ದುಲ್ ಅಬ್ರಾರ್ ಮತ್ತು ಅಬ್ದುಲ್ ಹನ್ನಾನ್ನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಮುಸ್ಲಿಂ ಯುವಕರಿಗೆ ಬಲೆ ಬೀಸಿ ಫೇಸ್ ಬುಕ್ ಮೂಲಕ ಜಿಹಾದಿ, ಧರ್ಮ ಎಂಬ ಬಗ್ಗೆ ವಿಡಿಯೋಗಳನ್ನ ಶೇರ್ ಮಾಡಿ ಯುವಕರನ್ನ ಐಸಿಸ್ನತ್ತ ಸೆಳೆಯಲಾಗುತ್ತಿತ್ತು. ಯುವಕರಿಗೆ ಹಣದ ಆಮಿಷವೊಡ್ಡಿ, ತರಬೇತಿ ನೀಡುತ್ತೇವೆಂದು ಸಿರಿಯಾಗೆ ಆಹ್ವಾನಿಸುತ್ತಿದ್ದರು. ಈ ಬಗ್ಗೆ ರಿಪಬ್ಲಿಕ್ ವಾಹಿನಿ ವರದಿಗಾರ್ತಿ ಪ್ರೇಮಾ, ರಹಸ್ಯ ಇಂಟರ್ ವ್ಯೂ ಮಾಡಿದ್ದರು.
ರಿಪಬ್ಲಿಕ್ ಟಿವಿಯ ಈ ಸ್ಟಿಂಗ್ ಪ್ರಸಾರದ ನಂತರ ಕೇಂದ್ರ ಗೃಹ ಸಚಿವಾಲಯ ಟೇಪ್ಗಳ ಪರಿಶೀಲನೆ ನಡೆಸುತ್ತಿದೆ. ಐಸಿಸ್ ಸಂಘಟನೆಯಲ್ಲಿ ಸೇರಿಕೊಳ್ಳೋದಕ್ಕೆ ಮುಂದಾಗಿರುವವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.