ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ ಜನ!: ಅಂಗರಗಟ್ಟಿ ಗ್ರಾಮದಲ್ಲಿ ಭಯದ ವಾತಾವರಣ

Published : Sep 02, 2017, 09:15 AM ISTUpdated : Apr 11, 2018, 01:10 PM IST
ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ ಜನ!: ಅಂಗರಗಟ್ಟಿ ಗ್ರಾಮದಲ್ಲಿ ಭಯದ ವಾತಾವರಣ

ಸಾರಾಂಶ

ಆ ಊರಿಗೆ ಊರೇ  ಆತಂಕದಲ್ಲಿದೆ. ಶಾಲೆಗೆ ಹೋಗಲು ಮಕ್ಕಳು ಭಯಪಡ್ತಾರೆ. ಸಂಜೆಯಾಗುತ್ತಿದ್ದಂತೆ ತಮ್ಮ ತಮ್ಮ ಮನೆಗಳಿಗೆ ಭದ್ರವಾಗಿ ಬೀಗ ಜಡಿದುಕೊಂಡು ಒಳಗೇ ಇರ್ತಾರೆ. ಹೊರಗಡೆ ಬರಲು ಹಿಂದೇಟು ಹಾಕ್ತಾರೆ. ಯಾಕಂತೀರಾ? ಇಲ್ಲಿದೆ ನೋಡಿ ವಿವರ

ಹಾವೇರಿ(ಸೆ.02): ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನ ಅಂಗರಗಟ್ಟಿ ಗ್ರಾಮ. ಈ ಗ್ರಾಮಸ್ಥರು ಮನೆಯಿಂದ ಹೊರಬರಲು ನೂರು ಬಾರಿ ಯೋಚನೆ ಮಾಡ್ತಾರೆ. ಶಾಲೆಗೆ ಹೋಗಲು ಮಕ್ಕಳು ಭಯಪಡ್ತಾರೆ. ಇದಕ್ಕೆ ಕಾರಣ ಚಿರತೆ.

ಹೌದು ಕಳೆದೊಂದು  ವಾರದಿಂದಲೂ ಈ ಗ್ರಾಮದಲ್ಲಿ ಅಕ್ಷರಶಃ ಭಯದ ವಾತಾವರಣ ನಿರ್ಮಾಣವಾಗಿದೆ.. ಕಳೆದ ವಾರ ಈ ಗ್ರಾಮದ ಹೊರವಲಯದಲ್ಲಿರೋ ಒಂಟಿ ಮನೆಯೊಂದರಲ್ಲಿ ಚಿರತೆ ಮರಿಯೊಂದು ಒಳನುಗ್ಗಿತ್ತು. ಸುದ್ದಿ ತಿಳಿದು ಗ್ರಾಮಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ  ಚಿರತೆ ಮರಿಯನ್ನ ಸೆರೆಹಿಡಿದಿದ್ದರು. ಆದ್ರೆ ಆ ಚಿರತೆಯ ತಾಯಿ ಜನರನ್ನು ಭಯಭೀತಗೊಳಿಸಿದೆ. ಸಿಕ್ಕಸಿಕ್ಕವರ ಮೇಲೆ ಅಟ್ಯಾಕ್ ಮಾಡ್ತಿದೆ. ಮೊನ್ನೆಯಷ್ಟೆ ಒಂದು ಕುರಿ ಮರಿಯನ್ನು ತಿಂದು ಹಾಕಿದೆ. ಅಲ್ದೇ  ತನ್ನ ಮರಿಯನ್ನು ಸೆರೆಹಿಡಿದ ಮನೆಯ ಸುತ್ತಲೇ ಚಿರತೆ ಸುಳಿದಾಡುತ್ತಿದೆ.

ಸಂಜೆಯಾಗುತ್ತಿದ್ದಂತೆ ಗ್ರಾಮದ ತುಂಬೆಲ್ಲ ಸುಳಿದಾಡುತ್ತಿದೆ. ರಾತ್ರಿಯಾದಂತೆ ಈ ಮಾರ್ಗದಲ್ಲಿ ಸಂಚರಿಸೋ ಬೈಕ್ ಸವಾರರಿಗೆ ಚಿರತೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದೆ. ಶಾಲಾ ಮಕ್ಕಳಿಗೂ ಚಿರತೆ ಕಂಡಿದ್ದು ಶಾಲಾ ವಿದ್ಯಾರ್ಥಿಗಳು ಭಯಭೀತರಾಗಿ ಶಾಲೆಗೆ ಹೋಗುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಇಷ್ಟೇಲ್ಲ ಆದ್ದರೂ ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಇನ್ನೂ ಎಚ್ಚರಗೊಂಡಿಲ್ಲ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಾದರೂ ಅರಣ್ಯ ಇಲಾಖಾಧಿಕಾರಿಗಳು ಚಿರತೆಯನ್ನು ಸೆರೆಹಿಡಿದು, ಗ್ರಾಮಸ್ಥರಲ್ಲಿ ಮನೆ ಮಾಡಿರುವ ಆತಂಕವನ್ನು ದೂರ ಮಾಡಬೇಕಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆನೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ರೈಲು, 7 ಗಜ ಬಲಿ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ