ಲಾಂಗ್ ಬೀಸಿದ ದರೋಡೆಕೋರ: ರಕ್ಷಣೆಗಾಗಿ ಪೊಲೀಸರ ಫೈರಿಂಗ್

Published : Dec 04, 2017, 10:45 AM ISTUpdated : Apr 11, 2018, 12:59 PM IST
ಲಾಂಗ್ ಬೀಸಿದ ದರೋಡೆಕೋರ: ರಕ್ಷಣೆಗಾಗಿ ಪೊಲೀಸರ ಫೈರಿಂಗ್

ಸಾರಾಂಶ

ಅಶ್ವತ್ಥ್’ನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಲಾಂಗ್’ನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಪೇದೆ ಆಕಾಶ್ ಎಂಬುವವರು ಗಾಯಗೊಂಡಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಅಶ್ವತ್ಥ್ ಕಾಲಿಗೆ ಗುಂಡು ಹಾರಿಸಿದ್ದಾರೆ.

ಬೆಂಗಳೂರು(ಡಿ.4): ಬೆಂಗಳೂರಿನ ಕುಖ್ಯಾತ ದರೋಡೆಕೋರ ಅಶ್ವತ್ಥ್ ಮೇಲೆ ಗುಂಡಿನ ದಾಳಿ ನಡೆದಿದೆ. ಯಶವಂತಪುರದ ಆರ್’ಎಂಸಿ ಯಾರ್ಡ್ ಬಳಿ ಪೊಲೀಸರು ದರೋಡೆಕೋರನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಭಾನುವಾರ ಮಧ್ಯರಾತ್ರಿ 12.30ರ ಸುಮಾರಿಗೆ ಈತ ಮರಿಯಪ್ಪನ ಪಾಳ್ಯದಲ್ಲಿ ಮೊಬೈಲ್, ಬೈಕ್ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ.

ಈ ವೇಳೆ ಅಶ್ವತ್ಥ್’ನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಲಾಂಗ್’ನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಪೇದೆ ಆಕಾಶ್ ಎಂಬುವವರು ಗಾಯಗೊಂಡಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಅಶ್ವತ್ಥ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಇನ್’ಸ್ಪೆಕ್ಟರ್ ಮುಕಾರಾಮ್ ಅವರು ಅಶ್ವತ್ಥ್ ಮೇಲೆ ಫೈರಿಂಗ್ ನಡೆಸಿದ್ದಾರೆ.

ಸದ್ಯ ಗಾಯಾಳು ಆಕಾಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದರೋಡೆಕೋರ ಅಶ್ವತ್ಥ್’ನನ್ನು ಕೂಡ  ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದ ಜನರಿಗೆ ಹೊಸ ವರ್ಷಕ್ಕೆ ಪವರ್‌ ಶಾಕ್‌, 'Top Up' ಹೆಸರಲ್ಲಿ ಟೋಪಿ ರೆಡಿಮಾಡಿಕೊಂಡ KERC
ಒಂದು ಕಪ್ ಚಹಾಕ್ಕಿಂತಲೂ ಕಡಿಮೆ ಬೆಲೆ, ಜಿಯೋ ಬಳಕೆದಾರರಿಗೆ 10GB ಡೇಟಾ ಸೂಪರ್ ಆಫರ್