ದೇವಸ್ಥಾನಕ್ಕೆ ಹೋಗುವವರೆಲ್ಲಾ ಹಿಂದೂಗಳಲ್ಲ: ಸಿಎಂ

Published : Jan 18, 2018, 05:08 PM ISTUpdated : Apr 11, 2018, 12:58 PM IST
ದೇವಸ್ಥಾನಕ್ಕೆ ಹೋಗುವವರೆಲ್ಲಾ ಹಿಂದೂಗಳಲ್ಲ: ಸಿಎಂ

ಸಾರಾಂಶ

ಅನ್ನ ಭಾಗ್ಯ ಯೋಜನೆಯಿಂದ ಯಾರೂ  ಸೋಮಾರಿಗಳಾಗಿಲ್ಲ.  ಎಲ್ಲರೂ ಕಾಯಕ ಮಾಡಬೇಕು ಹಾಗೆ ದಾಸೋಹ ಕೂಡ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು (ಜ.18): ಅನ್ನ ಭಾಗ್ಯ ಯೋಜನೆಯಿಂದ ಯಾರೂ  ಸೋಮಾರಿಗಳಾಗಿಲ್ಲ.  ಎಲ್ಲರೂ ಕಾಯಕ ಮಾಡಬೇಕು ಹಾಗೆ ದಾಸೋಹ ಕೂಡ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇಷ್ಟುದಿನ ದುಡಿದುಕೊಂಡು ತಿಂದವರು ಕೆಲ ದಿನ ದುಡಿಯದೇ ತಿಂದರೆ ಏನ್ ತಪ್ಪು ? ಬಡವರು ಕೆಲ ದಿನ ರೆಸ್ಟ್ ಮಾಡ್ಲಿ ಬಿಡಿ ಎಂದು  ತಮ್ಮ ಮಹತ್ವಾಕಾಂಕ್ಷೆಯ  ಅನ್ನ ಭಾಗ್ಯ ಯೋಜನೆಯನ್ನು  ಸಮರ್ಥಿಸಿಕೊಂಡಿದ್ದಾರೆ.   ಸಂಪ್ರದಾಯದ ಹೆಸರಲ್ಲಿ ಕಂದಾಚಾರ ,ಮೌಡ್ಯಗಳು ಹೆಚ್ಚಾಗುತ್ತಿವೆ.   ನನ್ನ ಕಾರಿನ ಮೇಲೆ ಕಾಗೆ ಕುಳಿತರೆ  ಅದನ್ನ ಶನಿ ಕಾಟ ಅಂತಾ ಕರೆದರು.  ಪಾಪ ಆ ಕಾಗೆಗೆ ಒಂದು ಕಣ್ಣು ಕಾಣ್ತಿರ್ಲಿಲ್ಲಾ ಹಾಗಾಗಿ  ನನ್ನ ಕಾರಿನ ಮೇಲೆ  ಕುಳಿತಿತ್ತು.  ಈ ಮೌಡ್ಯಗಳನ್ನ ತಡೆಯಲು ಮೌಡ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತಂದಿದ್ದೇವೆ. ದೇವಸ್ಥಾನಕ್ಕೆ ಹೋಗುವವರೆಲ್ಲಾ ಹಿಂದೂಗಳಲ್ಲ, ಮನುಷ್ಯತ್ವ ಇಲ್ಲದವನು ಹಿಂದೂ ಆಗಲಾರ.  ಮಾಧ್ಯಮಗಳೂ ಈ ವಿಚಾರದಲ್ಲಿ ಜಾಗೃತಿ ವಹಿಸಬೇಕು ಎಂದು ಸಿಎಂ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಹೂದಿಗಳ 'ಬೆಳಕಿನ ಹಬ್ಬ'ದಂದೇ ಭಯೋತ್ಪಾದಕ ದಾಳಿ! ಹನುಕ್ಕಾ ಫೆಸ್ಟಿವಲ್ ಮಹತ್ವ, ಇತಿಹಾಸ ತಿಳಿಯಿರಿ
ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ, ವಿವಿಐಪಿಗೆ ಐದು ಹೆಲಿಪ್ಯಾಡ್ ವ್ಯವಸ್ಥೆ!