ಜೇಟ್ಲಿ ಅನುಪಸ್ಥಿತಿ: ಸಚಿವ ಗೆಹ್ಲೋಟ್‌ಗೆ ಬಿಜೆಪಿ ರಾಜ್ಯಸಭೆ ನಾಯಕ ಪಟ್ಟ

By Web DeskFirst Published Jun 12, 2019, 8:57 AM IST
Highlights

ಅನಾರೋಗ್ಯದಿಂದ ಬಳಲಿ, ಚೇತರಿಸಿಕೊಳ್ಳುತ್ತಿರುವ ಜೇಟ್ಲಿ| ಜೇಟ್ಲಿ ಅನುಪಸ್ಥಿತಿ: ಸಚಿವ ಥಾವರ್‌ಚಂದ್‌ಗೆ ಬಿಜೆಪಿ ರಾಜ್ಯಸಭೆ ನಾಯಕ ಪಟ್ಟ| 

ನವದೆಹಲಿ[ಜೂ.12]: ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ಸಚಿವ ಥಾವರ್‌ಚಂದ್‌ ಗೆಹ್ಲೋಟ್‌ ಅವರನ್ನು ರಾಜ್ಯಸಭೆಯ ಬಿಜೆಪಿ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಕೇಂದ್ರದ ಮಾಜಿ ಸಚಿವ ಅರುಣ್‌ ಜೇಟ್ಲಿ ಅವರು ಈ ಹಿಂದಿನ ಸರ್ಕಾರದಲ್ಲಿ ರಾಜ್ಯಸಭೆಯ ಬಿಜೆಪಿ ನಾಯಕರಾಗಿದ್ದರು. ಆದರೆ ಸದ್ಯ ಜೇಟ್ಲಿ ಅನಾರೋಗ್ಯದಿಂದ ಬಳಲಿ, ಚೇತರಿಸಿಕೊಳ್ಳುತ್ತಿರುವ ಕಾರಣ, ಜೇಟ್ಲಿ ಅವರ ಸ್ಥಾನವನ್ನು ಗೆಹ್ಲೋಟ್‌ಗೆ ವಹಿಸಲಾಗಿದೆ.

ಮಧ್ಯಪ್ರದೇಶ ಮೂಲದ ಉತ್ತಮ ಸಂಸದೀಯ ಪಟುವಾಗಿರುವ ಗೆಹ್ಲೋಟ್‌ ಅವರು, ದಲಿತ ವರ್ಗದ ಬಿಜೆಪಿಯ ಪ್ರಬಲ ನಾಯಕರಾಗಿದ್ದಾರೆ.

click me!