ಮದ್ಯ ನಿಷೇಸಲು ಯೋಗಿಗೆ ಲಾಲು ಪುತ್ರ ಸವಾಲ್

Published : Mar 25, 2017, 04:58 PM ISTUpdated : Apr 11, 2018, 01:13 PM IST
ಮದ್ಯ ನಿಷೇಸಲು ಯೋಗಿಗೆ ಲಾಲು ಪುತ್ರ ಸವಾಲ್

ಸಾರಾಂಶ

ಮದ್ಯ ಎಂಬುದು ಅಪಾಯಕಾರಿ. ಆರೋಗ್ಯ ಹಾಗೂ ಸಮಾಜವನ್ನು ಅದು ಮಲಿನಗೊಳಿಸುತ್ತದೆ. ಯೋಗಿ ಅವರೇ ಜನರ ಗಮನವನ್ನು ಬೇರೆಡೆ ಸೆಳೆಯಬೇಡಿ. ಮದ್ಯ ನಿಗ್ರಹ ದಳ ಸ್ಥಾಪಿಸಿ ಎಂದು ಆರ್‌ಜೆಡಿ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಪುತ್ರರೂ ಆಗಿರುವ ತೇಜಸ್ವಿ ಸವಾಲು ಹಾಕಿದ್ದಾರೆ.

ಪಟನಾ(ಮಾ.25): ಅಧಿಕಾರಕ್ಕೇರಿದ ಬಳಿಕ ಕಸಾಯಿಖಾನೆಗಳಿಗೆ ಬೀಗ ಹಾಕಿಸುತ್ತಿರುವ, ಯುವತಿಯರಿಗೆ ಕಿರುಕುಳ ನೀಡುವ ಯುವಕರನ್ನು ನಿಗ್ರಹಿಸಲು ‘ರೋಮಿಯೋ ನಿಗ್ರಹ ದಳ’ ಆರಂಭಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಗೆ ನೆರೆಯ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸವಾಲು ಹಾಕಿದ್ದಾರೆ. ಉತ್ತರಪ್ರದೇಶದಲ್ಲಿ ಮದ್ಯ ನಿಷೇಧಿಸಿ, ರೋಮಿಯೋ ನಿಗ್ರಹ ದಳದ ಮಾದರಿಯಲ್ಲಿ ಮದ್ಯ ನಿಗ್ರಹ ದಳ ಆರಂಭಿಸುವಂತೆ ಆಗ್ರಹಿಸಿದ್ದಾರೆ.

ಮದ್ಯ ಎಂಬುದು ಅಪಾಯಕಾರಿ. ಆರೋಗ್ಯ ಹಾಗೂ ಸಮಾಜವನ್ನು ಅದು ಮಲಿನಗೊಳಿಸುತ್ತದೆ. ಯೋಗಿ ಅವರೇ ಜನರ ಗಮನವನ್ನು ಬೇರೆಡೆ ಸೆಳೆಯಬೇಡಿ. ಮದ್ಯ ನಿಗ್ರಹ ದಳ ಸ್ಥಾಪಿಸಿ ಎಂದು ಆರ್‌ಜೆಡಿ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಪುತ್ರರೂ ಆಗಿರುವ ತೇಜಸ್ವಿ ಸವಾಲು ಹಾಕಿದ್ದಾರೆ.

ಆದಿತ್ಯನಾಥ ಅವರು ಯೋಗಿಯಾಗಿದ್ದರೆ, ಧರ್ಮದ ಪ್ರಾಮಾಣಿಕ ಪ್ರತಿಪಾದಿಕರು ಆಗಿದ್ದರೆ, ಬಿಹಾರ ರೀತಿ ಉತ್ತರಪ್ರದೇಶದಲ್ಲೂ ಮದ್ಯ ನಿಷೇಸಬೇಕು ಎಂದು ಒತ್ತಾಯಿಸಿದ್ದಾರೆ. ಕಳೆದ ವರ್ಷದ ಏ.5ರಿಂದ ಬಿಹಾರದಲ್ಲಿ ಸಂಪೂರ್ಣ ಪಾನ ನಿಷೇಧ ಜಾರಿಯಲ್ಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುರ್ಗೆಯ ಜಾಗೋ ಮಾ ಸಾಕು ಜಾತ್ಯಾತೀತ ಗೀತೆ ಹಾಡಿ: ಪಶ್ಚಿಮ ಬಂಗಾಳದಲ್ಲಿ ಗಾಯಕಿಗೆ ಕಿರುಕುಳ: ಬಂಧನ
ಮಹಿಳಾ ಮೀಸಲಾತಿ ಜಾರಿಯಾದರೆ ಸದನದಲ್ಲಿ 75 ಮಹಿಳಾ ಶಾಸಕಿಯರು: ಸಚಿವ ಶಿವರಾಜ ತಂಗಡಗಿ