ಮೋಸ್ಟ್ ಹ್ಯಾಂಡ್ ಸಮ್ ರಾಜಕಾರಣಿಗೆ ಕಂಕಣ ಭಾಗ್ಯ

Published : Oct 01, 2018, 02:53 PM IST
ಮೋಸ್ಟ್ ಹ್ಯಾಂಡ್ ಸಮ್ ರಾಜಕಾರಣಿಗೆ ಕಂಕಣ ಭಾಗ್ಯ

ಸಾರಾಂಶ

ರಾಷ್ಟ್ರೀಯ ಜನತಾ ದಳದ ನಾಯಕ ಹಾಗೂ ಬಿಹಾರ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಜೀವನದಲ್ಲಿ 2019 ಮಹತ್ವದ ವರ್ಷವಾಗುವ ಬಗ್ಗೆ ಸುಳಿವು ನೀಡಿದ್ದಾರೆ. 

ಪಾಟ್ನಾ :  ರಾಷ್ಟ್ರೀಯ ಜನತಾ ದಳದ ನಾಯಕ ಹಾಗೂ ಬಿಹಾರ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಜೀವನದಲ್ಲಿ 2019 ಮಹತ್ವದ ವರ್ಷವಾಗುವ ಬಗ್ಗೆ ಸುಳಿವು ನೀಡಿದ್ದಾರೆ. 

2019ರಲ್ಲಿ ಲೋಕಸಭಾ ಚುನಾವಣೆಯೂ ನಡೆಯುತ್ತಿದ್ದು ಇದೇ ವೇಳೆ ತೇಜಸ್ವಿ ವಿವಾಹವೂ ಕೂಡ ನಡೆಯುತ್ತದೆ ಎನ್ನುವ ಬಗ್ಗೆಯೂ ಅವರು ಸುಳಿವೊಂದನ್ನು ಬಿಟ್ಟುಕೊಟ್ಟಿದ್ದಾರೆ.  

ಡಿಸೆಂಬರ್ ವೇಳೆಗೆ  ಆರ್ ಜೆಡಿಯಿಂದ ಮಹಾ ರ್ಯಾಲಿಯನ್ನು ನಡೆಸಲಾಗುತ್ತಿದೆ. ಇನ್ನು ಅಕ್ಟೋಬರ್ 6 ರಂದು  ಸಂವಿಧಾನ ಬಚಾವೋ ನ್ಯಾಯ ಯಾತ್ರೆಯನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 

ಇನ್ನು ಮೋಸ್ಟ್ ಹ್ಯಾಂಡ್ ಸಮ್ ತೇಜಸ್ವಿ ಯಾದವ್ ಅವರಿಗೆ ಈಗಾಗಲೇ ಅನೇಕ ಮದುವೆ ಪ್ರಪೋಸಲ್ ಗಳು ಬರುತ್ತಿದ್ದು, ಚುನಾವಣೆ ಬಳಿಕವೇ ವಿವಾಹದ ಚಿಂತನೆ ನಡೆಸಲಾಗುವುದು ಎಂದು ಹೆಳಿದ್ದಾರೆ. 

ಇದೇ ವೇಳೆ ಸೀಟುಗಳ ಹಂಚಿಕೆ ಹಾಗೂ ಮಹಾ ಘಟಬಂಧನದ ಭಾಗವಾಗುವ ಬಗ್ಗೆಯೂ ಪ್ತಕ್ರಿಯಿಸಿದ ತೇಜಸ್ವಿ ಯಾದವ್ ಅವರವರ ಗೆಲ್ಲುವ ಸಾಮರ್ಥ್ಯಕ್ಕೆ ಅನುಗುಣವಾಗಿ ಸೀಟು ಹಂಚಿಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?