
ಬೆಂಗಳೂರು(ಸೆ. 17): ಖ್ಯಾತ ಬಲಪಂಥೀಯ ಚಿಂತಕ, ವಿಶ್ಲೇಷಕ, ಹೋರಾಟಗಾರ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯ ಅಚ್ಚುಮೆಚ್ಚಿನ ರಾಜಕಾರಣಿಗಳ್ಯಾರು? ನರೇಂದ್ರ ಮೋದಿ, ಅಮಿತ್ ಶಾ ಮೊದಲಾದ ಬಿಜೆಪಿ ನಾಯಕರ ಹೆಸರು ಸಹಜವಾಗಿಯೇ ಬರುತ್ತದೆ. ಆದರೆ, ಚಕ್ರವರ್ತಿಯವರ ಫೇವರಿಟ್ ರಾಜಕಾರಣಿಗಳ ಲಿಸ್ಟ್'ನಲ್ಲಿ ಜೆಡಿಎಸ್'ನ ಮುಖಂಡರೊಬ್ಬರು ಇದ್ದಾರಂತೆ. ಅದೂ ಮುಸ್ಲಿಮ್ ಮುಖಂಡರು. ಚಕ್ರವರ್ತಿ ಸೂಲಿಬೆಲೆ ತಮ್ಮ ಸೋಷಿಯಲ್ ಮೀಡಿಯಾ ತಾಣಗಳಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಜೆಡಿಎಸ್'ನ ರಾಷ್ಟ್ರೀಯ ವಕ್ತಾರ ತನ್ವೀರ್ ಅಹ್ಮದ್ ಅವರನ್ನು ಪ್ರಶಂಸಿಸಿ ಚಕ್ರವರ್ತಿ ಟ್ವೀಟ್ ಮಾಡಿದ್ದಾರೆ. ಫೇಸ್ಬುಕ್'ನಲ್ಲಿ ಪೋಸ್ಟ್ ಕೂಡ ಹಾಕಿದ್ದಾರೆ.
"ರಾಜಕೀಯದಲ್ಲಿ ನಾನು ಗೌರವಿಸುವುದು ಕೆಲವೇ ವ್ಯಕ್ತಿಗಳನ್ನು. ನಿಸ್ಸಂಶಯವಾಗಿ ಇವರ ಪೈಕಿ ತನ್ವೀರ್ ಭಾಯ್ ಕೂಡ ಒಬ್ಬರು. ಇವರದು ಬಹಳ ಸಾದಾ ವ್ಯಕ್ತಿತ್ವ. ಆದ್ಯಾತ್ಮ ಚಿಂತಕ, ರಾಷ್ಟ್ರೀಯವಾದಿ. ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಶ್ರೇಷ್ಠ ಮಾನವ," ಎಂದು ಚಕ್ರವರ್ತಿ ಸೂಲಿಬೆಲೆ ಬರೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.