ಜಯಾ ಹಣ ಲೂಟಿ : ಉಲ್ಟಾ ಹೊಡೆದ ಸಚಿವ

Published : Jun 21, 2018, 07:45 AM IST
ಜಯಾ ಹಣ ಲೂಟಿ : ಉಲ್ಟಾ ಹೊಡೆದ ಸಚಿವ

ಸಾರಾಂಶ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರು ಕೊಳ್ಳೆ ಹೊಡೆದ ಅಕ್ರಮ ಹಣವನ್ನು ಎಎಂಎಂಕೆ ಮುಖಂಡ ಮತ್ತು ಶಾಸಕ ಟಿ.ಟಿ.ವಿ.ದಿನಕರನ್‌ ಮತ್ತು ಅವರ ಕುಟುಂಬ ಬಳಸಿಕೊಂಡಿದೆ ಎಂಬುದಾಗಿ ಆರೋಪಿಸಿದ್ದ ತಮಿಳುನಾಡು ಸಚಿವರೊಬ್ಬರು ಇದೀಗ ಉಲ್ಟಾಹೊಡೆದಿದ್ದಾರೆ.

ಮದುರೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರು ಕೊಳ್ಳೆ ಹೊಡೆದ ಅಕ್ರಮ ಹಣವನ್ನು ಎಎಂಎಂಕೆ ಮುಖಂಡ ಮತ್ತು ಶಾಸಕ ಟಿ.ಟಿ.ವಿ.ದಿನಕರನ್‌ ಮತ್ತು ಅವರ ಕುಟುಂಬ ಬಳಸಿಕೊಂಡಿದೆ ಎಂಬುದಾಗಿ ಆರೋಪಿಸಿದ್ದ ತಮಿಳುನಾಡು ಸಚಿವರೊಬ್ಬರು ಇದೀಗ ಉಲ್ಟಾಹೊಡೆದಿದ್ದಾರೆ.

ಈ ಬಗ್ಗೆ ಮಾತನಾಡಿದ ಸಚಿವ ಅರಣ್ಯ ಸಚಿವ ದಿಂಡಿಗಲ್‌ ಸಿ.ಶ್ರೀನಿವಾಸನ್‌ ಅವರು, ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಸಾರ್ವಜನಿಕ ಹಣವನ್ನು ಲೂಟಿ ಮಾಡಿದ್ದರು ಎಂದು ಹೇಳಿಯೇ ಇಲ್ಲ. ಇದರ ಬದಲಿಗೆ ಜಯಲಲಿತಾ ಅವರಿಗೆ ತಿಳಿಯದಂತೆ ದಿನಕರನ್‌ ಸೇರಿದಂತೆ ಜಯಾ ಆಪ್ತೆಯಾಗಿದ್ದ ಶಶಿಕಲಾ ಅವರ ಕುಟುಂಬಸ್ಥರು ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆದಿದ್ದರು ಎಂಬುದಾಗಿ ಹೇಳಿದ್ದೆ, ಎಂದಿದ್ದಾರೆ.

ಆದರೆ, ಅಮ್ಮನ ಕುರಿತು ನಾನು ಸೇರಿದಂತೆ ಯಾರೊಬ್ಬರು ಇಂಥ ಆರೋಪ ಮಾಡಲು ಸಾಧ್ಯವಿಲ್ಲ. ಈ ರೀತಿ ಕೊಳ್ಳೆ ಹೊಡೆದ ಹಣವನ್ನೇ ದಿನಕರನ್‌ ಅವರು ತಮ್ಮ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ
ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!