ಗುಡುಗುಸಹಿತ ಮಳೆಗೆ ತಾಜ್'ಮಹಲ್ ಗೇಟ್'ಗಳಿಗೆ ಹಾನಿ

Published : Apr 12, 2018, 03:41 PM ISTUpdated : Apr 14, 2018, 01:13 PM IST
ಗುಡುಗುಸಹಿತ ಮಳೆಗೆ ತಾಜ್'ಮಹಲ್ ಗೇಟ್'ಗಳಿಗೆ ಹಾನಿ

ಸಾರಾಂಶ

ಪ್ರವಾಸಿ ತಾಣದ ದಕ್ಷಿಣ ದ್ವಾರದ ಗೇಟುಗಳು, ಕೆಲವು ವಿಶೇಷ ವಸ್ತುಗಳು ಹಾನಿಗೊಳಗಾಗಿವೆ. ಆದರೆ ಕಟ್ಟಡಕ್ಕೆ ಯಾವುದೇ ರೀತಿಯ ತೊಂದರೆಯಾಗಿಲ್ಲ.

ನವದೆಹಲಿ(ಏ.12): ಆಗ್ರದಲ್ಲಿ ಗುಡುಗುಸಹಿತ ಮಳೆಗೆ ವಿಶ್ವವಿಖ್ಯಾತ ತಾಜ್'ಮಹಲ್'ನ ಪ್ರವೇಶದ್ವಾರದ ಗೇಟ್'ಗಳು ಹಾನಿಗೊಳಗಾಗಿವೆ.

ಮೊಘಲ್ ಚಕ್ರವರ್ತಿ ಶಹಜಹಾನ್ ನಿರ್ಮಿತ ತಾಜ್ ಯುನೆಸ್ಕೋದಿಂದ ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಯ ಇತರ 11 ಅದ್ಭುತಗಳಲ್ಲಿ ಸ್ಥಾನ ಪಡೆದುಕೊಂಡಿದೆ. ನಿನ್ನೆ ಸುರಿದ ಗುಡುಗು ಸಹಿತ ಭಾರಿ ಮಳೆಗೆ ಪ್ರವೇಶದ್ವಾರದ ಗೇಟುಗಳು,ಧ್ವಜಸ್ತಂಭ ಮುರಿದುಕೊಂಡಿವೆ.

ಪ್ರವಾಸಿ ತಾಣದ ದಕ್ಷಿಣ ದ್ವಾರದ ಗೇಟುಗಳು, ಕೆಲವು ವಿಶೇಷ ವಸ್ತುಗಳು ಹಾನಿಗೊಳಗಾಗಿವೆ. ಆದರೆ ಕಟ್ಟಡಕ್ಕೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಅಸ್ತವ್ಯಸ್ತಗೊಂಡಿರುವ ಎಲ್ಲ ವಸ್ತುಗಳನ್ನು ಪರಿಶೀಲಿಸಿ ಪುನರ್'ನಿರ್ಮಾಣ ಕಾರ್ಯ ಕೈಗೊಳ್ಳುವುದಾಗಿ ಭಾರತದ ಪುರತತ್ವ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಗ್ರ,ಫಿರೋಜಾಬಾದ್ ಮುಂತಾದ ಕಡೆ ಗುಡುಗುಸಹಿತ ಮಳೆಯಿಂದಾಗಿ 8 ಮಂದಿ ಮೃತಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?