
ಮುಂಬೈ(ಡಿ.22): ಮಹಾರಾಷ್ಟ್ರದ ನಾಂದಣಿಯ ಜೈನ ಮಠದ ಜಿನಸೇನ ಭಟ್ಟಾರಕ ಮಹಾಸ್ವಾಮೀಜಿ ದುರಂತ ಸಾವು ಕಂಡಿದ್ದಾರೆ. ಮಠದಲ್ಲಿ ಸಾಕುತ್ತಿದ್ದ ಆನೆಮರಿ ದಾಳಿಯಿಂದ ಇಲ್ಲಿನ ಭಟ್ಟಾರಕ ಸ್ವಾಮೀಜಿ ಮೃತಪಟ್ಟಿದ್ದಾರೆ. ಸ್ವಾಮೀಜಿ ಆನೆ ಮರಿಗೆ ಮೇವು ನೀಡಲು ಹೋದಾಗ ಸೊಂಡಿಲಿಂದ ಅಪ್ಪಳಿಸಿ ಈ ದುರಂತ ಸಂಭವಿಸಿದೆ.
ಹಸಿ ಮೇವು ತರಲು ಹೋಗಿದ್ದ ಮಾವುತ ಸಾಕಷ್ಟು ಸಮಯವಾದರೂ ಕೂಡ ಬಾರದ ಕಾರಣ ಮರುಗಿದ ಸ್ವಾಮೀಜಿ, ತಾವೇ ಆನೆಗೆ ಮೇವನ್ನು ನೀಡಲು ಹೋಗಿದ್ದಾರೆ.
ಈ ವೇಳೆ ಕೋಪಗೊಂಡಿದ್ದ ಆನೇ ಮರಿ ಸೊಂಡಿಲಿನಲ್ಲಿ ಹಿಡಿದುಕೊಂಡು ಮೂರು-ನಾಲ್ಕು ಭಾರಿ ಅಪ್ಪಳಿಸಿದೆ. ಇದರಿಂದ ಸ್ವಾಮೀಜಿ ಸ್ಥಳದಲ್ಲಿಯೇ ಮೃತರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.