ಗಾಂಧಿ ಜಯಂತಿಯಂದು ಸ್ವಚ್ಛ ಬೆಂಗಳೂರು ಅಭಿಯಾನ; ನಿಮ್ಮ ಏರಿಯಾದಲ್ಲೇ ಪಾಲ್ಗೊಳ್ಳಿ

Published : Sep 30, 2017, 08:17 PM ISTUpdated : Apr 11, 2018, 12:42 PM IST
ಗಾಂಧಿ ಜಯಂತಿಯಂದು ಸ್ವಚ್ಛ ಬೆಂಗಳೂರು ಅಭಿಯಾನ; ನಿಮ್ಮ ಏರಿಯಾದಲ್ಲೇ ಪಾಲ್ಗೊಳ್ಳಿ

ಸಾರಾಂಶ

ವಿಶೇಷವೆಂದರೆ, ಈ ಅಭಿಯಾನವು ಕೇವಲ ಸಾಂಕೇತಿಕವಾಗಿ ನಡೆಯುತ್ತಿಲ್ಲ. ಪ್ರತಿಯೊಂದು ವಾರ್ಡ್'ನಲ್ಲೂ ಸೋಮವಾರ ಸ್ವಚ್ಛತಾ ಕಾರ್ಯ ನಡೆಯಲಿದೆ. ಬೆಂಗಳೂರಿನ ಯಾವುದೇ ಪ್ರಜೆಯೂ ತಾನಿರುವ ಪ್ರದೇಶದಲ್ಲೇ ಸ್ವಚ್ಛ ಬೆಂಗಳೂರು ಅಭಿಯಾನದಲ್ಲಿ ಪಾಲ್ಗೊಳ್ಳಬಹುದು.

ಬೆಂಗಳೂರು: ನಮ್ಮ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಬೆಂಗಳೂರು ಫೌಂಡೇಶನ್, ಯುನೈಟೆಡ್ ಬೆಂಗಳೂರು ಮೊದಲಾದ ಸ್ವಯಂಸೇವಾ ಸಂಸ್ಥೆಗಳು ಸ್ವಚ್ಛ ಬೆಂಗಳೂರು ಅಭಿಯಾನ ನಡೆಸಿವೆ. ಅಕ್ಟೋಬರ್ 2, ಸೋಮವಾರ ಗಾಂಧಿ ಜಯಂತಿಯಂದು ಈ ಮಹಾ ಸ್ವಚ್ಛಾ ಕಾರ್ಯ ನಡೆಯಲಿದೆ. ವಿಶೇಷವೆಂದರೆ, ಈ ಅಭಿಯಾನವು ಕೇವಲ ಸಾಂಕೇತಿಕವಾಗಿ ನಡೆಯುತ್ತಿಲ್ಲ. ಪ್ರತಿಯೊಂದು ವಾರ್ಡ್'ನಲ್ಲೂ ಸೋಮವಾರ ಸ್ವಚ್ಛತಾ ಕಾರ್ಯ ನಡೆಯಲಿದೆ. ಬೆಂಗಳೂರಿನ ಯಾವುದೇ ಪ್ರಜೆಯೂ ತಾನಿರುವ ಪ್ರದೇಶದಲ್ಲೇ ಸ್ವಚ್ಛ ಬೆಂಗಳೂರು ಅಭಿಯಾನದಲ್ಲಿ ಪಾಲ್ಗೊಳ್ಳಬಹುದು.

ಬೆಂಗಳೂರಿನ 72 ವಾರ್ಡ್'ಗಳಲ್ಲಿ ಸೋಮವಾರ ಸಾವಿರಾರು ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ನಗರದ 9 ಕೆರೆಗಳನ್ನು ಅಂದು ಸ್ವಚ್ಛಗೊಳಿಸಲಾಗುತ್ತಿದೆ. ಬೆಂಗಳೂರಿನ ಮಟ್ಟಿಗೆ ಇದೊಂದು ಐತಿಹಾಸಿಕ ಜನಾಂದೋಲನವಾಗಿದೆ. ಹಿಂದೆಂದೂ ಈ ಪರಿಯಲ್ಲಿ ಜನರಿಂದ ನಗರ ಸ್ವಚ್ಛತೆ ಕಾರ್ಯ ಆಗಿದ್ದಿಲ್ಲ.

ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅವರ ಅಪರಿಮಿತ ಆಸಕ್ತಿಯಲ್ಲಿ ನಡೆಯುತ್ತಿರುವ ಈ ಸ್ವಚ್ಛ ಬೆಂಗಳೂರು ಅಭಿಯಾನದಲ್ಲಿ ನೀವು ಹೇಗೆ ಮತ್ತು ಎಲ್ಲಿ ಪಾಲ್ಗೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ...

ರಾಹುಲ್ ಗುಜ್ಜರ್: 9986130353
ಅನಿರುದ್ಧ್ ಎಸ್ ದತ್: 7019104197

ಅಥವಾ ಇಲ್ಲಿ ಕ್ಲಿಕ್ ಮಾಡಿ. https://goo.gl/o1aLy3

ಹೆಚ್ಚಿನ ಮಾಹಿತಿಗಾಗಿ #UnitedBengaluru ಫೇಸ್ಬುಕ್ ಪುಟವನ್ನು ನೋಡಿ.

ನಿಮ್ಮ ಸ್ನೇಹಿತರು, ಕುಟುಂಬ ಹಾಗು ಮಕ್ಕಳನ್ನು ಈ ಅಭಿಯಾನಕ್ಕೆ ಜೋಡಿಸಿ. ನಮ್ಮ ನಗರವನ್ನು ರಕ್ಷಿಸುವ ನಾಗರೀಕರಾಗಿ ಈ ಗಾಂಧಿ ಜಯಂತಿಯನ್ನು ಒಟ್ಟಾಗಿ ಆಚರಿಸಿರಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಮಳವಳ್ಳಿಗೆ ಆಗಮನ ನಿರೀಕ್ಷೆ
ಧಾರವಾಡ: ಉದ್ಯೋಗಾಕಾಂಕ್ಷಿಗಳಿಗೆ ಸಿಎಂ ಭೇಟಿ ಮಾಡಿಸಲು ಹೈಕೋರ್ಟ್ ಸೂಚನೆ