ಮುಂಬೈ ರೈಲು ದುರಂತ: ಮೃತದೇಹಕ್ಕೆ ಅಗೌರವ ತೋರಿದ್ದಾರೆಂದು ವೈದ್ಯರ ಮೇಲೆ ಶಿವಸೇನಾ ಸದಸ್ಯರಿಂದ ಹಲ್ಲೆ

Published : Sep 30, 2017, 08:10 PM ISTUpdated : Apr 11, 2018, 12:50 PM IST
ಮುಂಬೈ ರೈಲು ದುರಂತ: ಮೃತದೇಹಕ್ಕೆ ಅಗೌರವ ತೋರಿದ್ದಾರೆಂದು ವೈದ್ಯರ ಮೇಲೆ ಶಿವಸೇನಾ ಸದಸ್ಯರಿಂದ ಹಲ್ಲೆ

ಸಾರಾಂಶ

ಇಲ್ಲಿನ ಖ್ಯಾತ ಕಿಂಗ್ ಎಡ್ವರ್ಡ್ ಆಸ್ಪತ್ರೆಯ ವೈದ್ಯರ ಮೇಲೆ ಶಿವಸೇನೆಯ 5 ಸದಸ್ಯರು ಹಲ್ಲೆ ಮಾಡಿ ತಲೆಗೆ ಹೊಡೆದಿದ್ದಾರೆ.  ಇಬ್ಬರು ಹಲ್ಲೆಗಾರರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಮುಂಬೈ (ಸೆ.30): ಇಲ್ಲಿನ ಖ್ಯಾತ ಕಿಂಗ್ ಎಡ್ವರ್ಡ್ ಆಸ್ಪತ್ರೆಯ ವೈದ್ಯರ ಮೇಲೆ ಶಿವಸೇನೆಯ 5 ಸದಸ್ಯರು ಹಲ್ಲೆ ಮಾಡಿ ತಲೆಗೆ ಹೊಡೆದಿದ್ದಾರೆ.  ಇಬ್ಬರು ಹಲ್ಲೆಗಾರರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ನಿನ್ನೆ ನಡೆದ ರೈಲು ದುರಂತದಲ್ಲಿ ಮೃತಪಟ್ಟವರನ್ನು ಗುರುತಿಸಲು ಅವರ ಹಣೆ ಮೇಲೆ ಮಾರ್ಕ್ ಮಾಡಲಾಗಿತ್ತು. ಇದರಿಂದ  ಆಕ್ರೋಶಗೊಂಡ ಶಿವಸೇನೆ ಸದಸ್ಯರು ಆಸ್ಪತ್ರೆಯ ವೈದ್ಯ ಡಾ. ಹರೀಶ್ ಪಾಥಕ್ ಮೇಲೆ ಹಲ್ಲೆ ನಡೆಸಿದ್ದಾರೆ. ಮೃತದೇಹದ ಮೇಲೆ ಹೀಗೆಲ್ಲಾ ಬರೆಯುವುದು ಅವರಿಗೆ ಅಗೌರವ ತೋರಿದಂತಾಗುತ್ತದೆ ಎಂದು ಶಿವಸೇನೆ ಸದಸ್ಯರು ಹೇಳಿದ್ದಾರೆ.

ಮೃತರ ಸಂಬಂಧಿಕರಿಗೆ ಗುರುತಿಸಲು ಅನುಕೂಲವಾಗಲಿ ಎಂದು ಅವರ ಹಣೆ ಮೇಲೆ ನಂಬರ್ ಹಾಕಿದ್ದೇವೆ. ತಮ್ಮ ತಮ್ಮ ಸಂಬಂಧಿಕರು, ಸ್ನೇಹಿತರನ್ನು ನೋಡಲು ನೂರಾರು ಜನರು ಬರುವುದರಿಂದ ಅನುಕೂಲದ ದೃಷ್ಟಿಯಿಂದ ಅವರ ಹಣೆ ಮೇಲೆ ಬರೆದಿದ್ದೇವೆ. ಮೃತದೇಹವನ್ನು ಗುರುತಿಸಿದ ನಂತರ ಹಣೆ ಮೇಲಿರುವ ಮಾರ್ಕನ್ನು ತೆಗೆದು ಅವರಿಗೆ ಹಸ್ತಾಂತರಿಸಿದ್ದೇವೆ.  ಜನರ ಭಾವನೆಗೆ ನೋವುಂಟು ಮಾಡುವ ಉದ್ದೇಶ ನಮಗಿರಲಿಲ್ಲ ಎಂದು ಡಾ. ಹರೀಶ್ ಸ್ಪಷ್ಟನೆ ನೀಡಿದ್ದಾರೆ.

ದಾಳಿಯ ನಂತರ ಕೆಲವು ಆಸ್ಪತ್ರೆ ಸಿಬ್ಬಂದಿಗಳು ಭಯದಿಂದ ಕರ್ತವ್ಯಕ್ಕೆ ಹಾಜರಾಗಲು ನಿರಾಕರಿಸಿದ್ದಾರೆ.

 

  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಮಳವಳ್ಳಿಗೆ ಆಗಮನ ನಿರೀಕ್ಷೆ
ಧಾರವಾಡ: ಉದ್ಯೋಗಾಕಾಂಕ್ಷಿಗಳಿಗೆ ಸಿಎಂ ಭೇಟಿ ಮಾಡಿಸಲು ಹೈಕೋರ್ಟ್ ಸೂಚನೆ