
ಬೆಂಗಳೂರು: ಮಕ್ಕಳಲ್ಲಿ ಮತ್ತು ಯುವ ಜನರಲ್ಲಿ ಸಾಹಸ ಪ್ರವೃತ್ತಿ ಮೂಡಿಸಲು, ಸಾಹಸೀ ಮಕ್ಕಳ ಉತ್ಸಾಹ ಹೆಚ್ಚಿಸುವ ಸಲುವಾಗಿ ಸುವರ್ಣನ್ಯೂಸ್ "ಶೌರ್ಯ ಪ್ರಶಸ್ತಿ" ಎಂಬ ಹೊಸ ಕಾರ್ಯಕ್ರಮ ಆಯೋಜಿಸಿದೆ. ಕಠಿಣ ಪರಿಸ್ಥಿತಿಯಲ್ಲಿ ಧೈರ್ಯ, ಸಾಹಸ ಮೆರೆದು ತಮ್ಮ ಜೀವ ಪಣಕ್ಕಿಟ್ಟು ಮತ್ತೊಬ್ಬರ ಪ್ರಾಣ ರಕ್ಷಿಸಿದ ಜನರನ್ನು ಗುರುತಿಸಿ ಸನ್ಮಾನಿಸಲು ಸುವರ್ಣನ್ಯೂಸ್ ಈ ಕಾರ್ಯಕ್ಕೆ ಕೈಹಾಕಿದೆ. ನೀವೇ ಆ ಸಾಹಸಿಗರಾಗಿದ್ದರೆ, ಅಥವಾ ಅಂಥ ಸಾಹಸಿಗರು ನಿಮಗೆ ಗೊತ್ತಿದ್ದರೆ ಕೂಡಲೇ ಸುವರ್ಣನ್ಯೂಸ್'ಗೆ ಪ್ರವೇಶಗಳನ್ನು ಕಳುಹಿಸಿ. ಮೇ 20ರಿಂದಲೇ ಪ್ರವೇಶ ಸ್ವೀಕರಿಸಲಾಗುತ್ತಿದೆ. ಪ್ರವೇಶ ಕಳುಹಿಸಲು ಜೂನ್ 11 ಕೊನೆಯ ದಿನಾಂಕವಾಗಿದೆ. ಜೂನ್ 23ರಂದು ನಗರದ ಟೌನ್'ಹಾಲ್'ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಈ ವಿಳಾಸಕ್ಕೆ ನೀವು ಪ್ರವೇಶ ಕಳುಹಿಸಬಹುದು:
'ಶೌರ್ಯ ಪ್ರಶಸ್ತಿ" ವಿಭಾಗ; ಸುವರ್ಣನ್ಯೂಸ್, ನಂ. 36, ಕ್ರೆಸೆಂಟ್ ರಸ್ತೆ, ಬೆಂಗಳೂರು-560001.
ಸಂಪರ್ಕ ಸಂಖ್ಯೆ: +91 7892181851
ಇಮೇಲ್: sp2017@suvarnanews.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.