ಸುವರ್ಣನ್ಯೂಸ್ ಇಂಪ್ಯಾಕ್ಟ್; ಶಾಸಕರ ಪ್ರವಾಸಕ್ಕೆ ಬಿತ್ತು ಬ್ರೇಕ್..!

Published : May 04, 2017, 06:27 AM ISTUpdated : Apr 11, 2018, 12:42 PM IST
ಸುವರ್ಣನ್ಯೂಸ್ ಇಂಪ್ಯಾಕ್ಟ್; ಶಾಸಕರ ಪ್ರವಾಸಕ್ಕೆ ಬಿತ್ತು ಬ್ರೇಕ್..!

ಸಾರಾಂಶ

ಶಾಸಕ ಕೆ.ಶಿವಮೂರ್ತಿ ನಾಯ್ಕ ಅಧ್ಯಕ್ಷತೆಯಲ್ಲಿ ಎಸ್ಸಿ-ಎಸ್ಟಿ ಕಲ್ಯಾಣ ಸಮಿತಿಯ ಸದಸ್ಯರು ಮೇ 12ರಿಂದ ಅಧ್ಯಯನ ಪ್ರವಾಸ ಕೈಗೊಳ್ಳಲಿತ್ತು.

ಬೆಂಗಳೂರು(ಮೇ 04): ಬರದ ನಡುವೆಯೂ ಉತ್ತರಭಾರತಕ್ಕೆ ಹೊರಟಿದ್ದ ರಾಜ್ಯದ ಶಾಸಕರ ಪ್ರವಾಸಕ್ಕೆ ಸದ್ಯಕ್ಕೆ ತಡೆಬಿದ್ದಿದೆ. ಶಾಸಕರ ಪ್ರವಾಶವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಅಧಿವೇಶನದವರೆಗೂ ಯಾವ ಶಾಸಕರನ್ನೂ ಪ್ರವಾಶಕ್ಕೆ ಕಳುಹಿಸುತ್ತಿಲ್ಲ. ಅಧಿವೇಶನದ ಬಳಿಕ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿಧಾನಸಭಾ ಸ್ಪೀಕರ್ ಕೆ.ಬಿ.ಕೋಳಿವಾಡ ತಿಳಿಸಿದ್ದಾರೆ. ಇದು ಸುವರ್ಣನ್ಯೂಸ್ ಇಂಪ್ಯಾಕ್ಟ್. ನಿನ್ನೆ ರಾತ್ರಿ ಮತ್ತು ಇಂದು ಬೆಳಗ್ಗೆಯಿಂದ ಸುವರ್ಣನ್ಯೂಸ್ ಸತತವಾಗಿ ಶಾಸಕರ ಪ್ರವಾಸದ ಕುರಿತು ವರದಿ ಪ್ರಸಾರ ಮಾಡುತ್ತಲೇ ಇತ್ತು.

ಏನಿದು ಶಾಸಕರ ಪ್ರವಾಸ?
ಅಧೀನ ಶಾಸನ ರಚನಾ ಸಮಿತಿಯ ತಂಡ ಹಾಗೂ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಕಲ್ಯಾಣ ಸಮಿತಿ ಸದಸ್ಯರು ಪ್ರತ್ಯೇಕವಾಗಿ ಪ್ರವಾಸ ಕೈಗೊಳ್ಳಲು ನಿರ್ಧಾರವಾಗಿತ್ತು. ಅಧೀನ ಶಾಸನ ರಚನಾ ಸಮಿತಿಯಲ್ಲಿ 14 ವಿಧಾನಸಭಾ ಸದಸ್ಯರು, 4 ವಿಧಾನಪರಿಷತ್ ಸದಸ್ಯರಿದ್ದಾರೆ. ಈ ತಂಡವು ಮೇ 9-16ರವರೆಗೆ ಉತ್ತರ ಭಾರತದ ರಾಜ್ಯಗಳಲ್ಲಿ ಅಧ್ಯಯನದ ಪ್ರವಾಸ ಕೈಗೊಳ್ಳಲಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಈ ತಂಡದಲ್ಲಿದ್ದಾರೆ.

ಇನ್ನು, ಶಾಸಕ ಕೆ.ಶಿವಮೂರ್ತಿ ನಾಯ್ಕ ಅಧ್ಯಕ್ಷತೆಯಲ್ಲಿ ಎಸ್ಸಿ-ಎಸ್ಟಿ ಕಲ್ಯಾಣ ಸಮಿತಿಯ ಸದಸ್ಯರು ಮೇ 12ರಿಂದ ಅಧ್ಯಯನ ಪ್ರವಾಸ ಕೈಗೊಳ್ಳಲಿತ್ತು.

ಅಧೀನ ಶಾಸನ ರಚನಾ ಸಮಿತಿ ಸದಸ್ಯ ಶಾಸಕರ ಪಟ್ಟಿ:
ಸಿದ್ದು ಬಿ ನ್ಯಾಮಗೌಡ,
ರಾಜಶೇಖರ್​ ಬಸವರಾಜ ಪಾಟೀಲ್​,
ಎ.ಎಸ್.ಪಾಟೀಲ್​ ನಡಹಳ್ಳಿ,
ದಿನೇಶ್​ ಗುಂಡೂರಾವ್,
ಜಿ.ಹಂಪಯ್ಯ ಸಾಹುಕಾರ ಬಲ್ಲಟಗಿ,
ಎಂ.ಕೆ.ಸೋಮಶೇಖರ್​,
ಬಿ.ಸುರೇಶ್​ಗೌಡ,
ಬಿ.ಎನ್​.ವಿಜಯಕುಮಾರ್​,
ಬಿ.ಝಡ್​.ಜಮೀರ್​ ಅಹ್ಮದ್​ ಖಾನ್​,
ಹಾಲಾಡಿ ಶ್ರೀನಿವಾಸ ಶೆಟ್ಟಿ,
ಕೆ.ಬಿ.ಪ್ರಸನ್ನಕುಮಾರ್​,
ಕೆ.ಬಿ.ಶಾಣಪ್ಪ,
ಸೋಮಣ್ಣ ಎಂ.ಬೇವಿನಮರದ,
ಎಂ.ನಾರಾಯಣಸ್ವಾಮಿ,
ಕಾಂತರಾಜ್​ ಬಿಎಂಎಲ್​

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು