ಅನಾಥ ವೃದ್ಧೆಗೆ ಆಶ್ರಯ ದೊರಕಿಸಿದ ಕನ್ನಡಪ್ರಭ, ಸುವರ್ಣ ನ್ಯೂಸ್‌

Published : Jul 29, 2019, 09:08 AM ISTUpdated : Jul 30, 2019, 06:09 PM IST
ಅನಾಥ ವೃದ್ಧೆಗೆ ಆಶ್ರಯ ದೊರಕಿಸಿದ ಕನ್ನಡಪ್ರಭ, ಸುವರ್ಣ ನ್ಯೂಸ್‌

ಸಾರಾಂಶ

ಬಾಗಲಕೋಟೆ ಹಳೇ ಬಸ್‌ ನಿಲ್ದಾಣದಲ್ಲಿ ಅನಾಥವಾಗಿ ಕಾಲ ಕಳೆಯುತ್ತಿರುವ ವೃದ್ಧೆಯೊಬ್ಬಳನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ನಿಂದ ಆಶ್ರಯ ಒದಗಿಸಲಾಗಿದೆ. 

ಬಾಗಲಕೋಟೆ [ಜು.29]: ನಾಲ್ಕೈದು ದಿನಗಳಿಂದ ಬಾಗಲಕೋಟೆ ಹಳೇ ಬಸ್‌ ನಿಲ್ದಾಣದಲ್ಲಿ ಅನಾಥವಾಗಿ ಕಾಲ ಕಳೆಯುತ್ತಿರುವ ವೃದ್ಧೆಯೊಬ್ಬಳನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಮುದಾಳತ್ವದಲ್ಲಿ ನಗರದ ವಸತಿ ರಹಿತರಿಗೆ ಇರುವ ಆಶ್ರಯಧಾಮಕ್ಕೆ ಸೇರಿಸಲಾಗಿದೆ.

"

ಮೂಲತಃ ವಿಜಯಪುರದವಳು ಎಂದು ಹೇಳಿಕೊಳ್ಳುವ ಕಾಜಾಬಿ ಸುಮಾರು 65 ಆಸುಪಾಸು ವಯಸ್ಸಿನವರು. ಈಕೆ ಕಳೆದ ನಾಲ್ಕೈದು ದಿನಗಳಿಂದ ನಗರದ ಹಳೇ ಬಸ್‌ ನಿಲ್ದಾಣದಲ್ಲೇ ಇದ್ದಳು. ಈಕೆಯನ್ನು ಯಾರೂ ಕೂಡ ಕೇಳೋರಿರಲಿಲ್ಲ. ನಿತ್ಯ ಬಸ್‌ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರೇ ಈಕೆಯ ಸ್ಥಿತಿ ಕಂಡು ಮಮ್ಮಲ ಮರುಗಿ ತಮ್ಮಲ್ಲಿದ್ದ ಆಹಾರ ಕೊಟ್ಟು ಹೋಗುತ್ತಿದ್ದರು.

"

ಈ ವಿಷಯ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಗಮನಕ್ಕೆ ಬಂದಿದೆ. ತಕ್ಷಣ ಆಕೆಯನ್ನು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಸ್ಥಾಪಿತವಾಗಿರುವ ನಗರ ವಸತಿ ರಹಿತರಿಗೆ ಇರುವಂತಹ ಆಶ್ರಯಧಾಮಕ್ಕೆ ಅಜ್ಜಿಯನ್ನು ತಂದು ಬಿಡಲಾಗಿದೆ. ಆಕೆಗೆ ವಸತಿ ಸಹಿತ ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆಶ್ರಯಧಾಮದವರು ಅಜ್ಜಿಯನ್ನು ಪೋಷಕರಿಗೆ ಒಪ್ಪಿಸುವ ಭರವಸೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೆಲುವಿನ ವಿಶ್ವಾಸದಲ್ಲಿ ಬೆಟ್ , ಚುನಾವಣೆ ಫಲಿತಾಂಶ ಉಲ್ಟಾ ಬೆನ್ನಲ್ಲೇ ಮೀಸೆ ಬೋಳಿಸಿದ ಮುಖಂಡ
ಚಿಕ್ಕಮಗಳೂರು: ಹೈಟೆಕ್ ಕಾರ್‌ನಲ್ಲಿ ಗೋ ಕಳ್ಳತನ; ಸಿನಿಮೀಯ ಶೈಲಿಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಚೇಸಿಂಗ್!