ಡಿಐಜಿ ರೂಪಾ ಹೇಳಿದ್ದು ಒಂದಕ್ಷರವೂ ಸುಳ್ಳಾಗಲಿಲ್ಲ : ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲು

Published : Jul 15, 2017, 09:13 AM ISTUpdated : Apr 11, 2018, 01:06 PM IST
ಡಿಐಜಿ ರೂಪಾ ಹೇಳಿದ್ದು ಒಂದಕ್ಷರವೂ ಸುಳ್ಳಾಗಲಿಲ್ಲ : ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲು

ಸಾರಾಂಶ

ಕೆಳಗಿನ ವಿಡಿಯೋದಲ್ಲಿರುವುದು  ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲು. ಬೆಂಗಳೂರಿನ ಹೊರಭಾಗದಲ್ಲಿರೋ ಈ ಜೈಲಿನಲ್ಲಿ ಸುಮಾರು 4 ಸಾವಿರ ಖೈದಿಗಳಿದ್ದಾರೆ. ಶಶಿಕಲಾರಂತ ಪೊಲಿಟಿಕಲ್ ಖೈದಿಯಿಂದ ಹಿಡಿದು, ಪಿಕ್​ಪಾಕೆಟರ್​, ಕೊಲೆಗಡುಕರು, ದರೋಡೆಕೋರರು, ಅತ್ಯಾಚಾರಿಗಳು ಎಲ್ಲರೂ ಇರೋದು ಈ ಜೈಲಿನಲ್ಲೇ.

ಸೆಂಟ್ರಲ್ ಜೈಲ್​ನಲ್ಲಿ ಏನೇನೆಲ್ಲ ಅಕ್ರಮ ನಡೆಯುತ್ತೆ ಅನ್ನೋದ್ರ ಬಗ್ಗೆ ಡಿಐಜಿ ರೂಪಾ ಪತ್ರ ಬರೆದು, ಅದೀಗ ರಾಷ್ಟ್ರಮಟ್ಟದ ಸುದ್ದಿಯಾಗಿದೆ. ನಿಜಕ್ಕೂ ಅಲ್ಲಿ ರೂಪಾ ಹೇಳಿದ ರೀತಿಯಲ್ಲಿ ದಂಧೆ ನಡೀತಾ ಇದ್ಯಾ..? ಅದನ್ನ ಪತ್ತೆ ಹಚ್ಚೋಕೆ ಮುಂದಾದ ಸುವರ್ಣ ನ್ಯೂಸ್​ಗೆ ಬೆಚ್ಚಿ ಬೀಳುವಂತಹ ಸಾಕ್ಷಿ ಸಿಗ್ತಾ ಹೋದ್ವು. ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲ್ ಅನ್ನೋದು ಈಗ ಅಕ್ಷರಶಃ ಗಾಂಜಾ ಬಜಾರ್ ಆಗಿ ಹೋಗಿದೆ. ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾದ ಸತ್ಯಗಳೇನು..? ಇಲ್ಲಿದೆ ಡೀಟೈಲ್ಸ್.

ಕೆಳಗಿನ ವಿಡಿಯೋದಲ್ಲಿರುವುದು  ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲು. ಬೆಂಗಳೂರಿನ ಹೊರಭಾಗದಲ್ಲಿರೋ ಈ ಜೈಲಿನಲ್ಲಿ ಸುಮಾರು 4 ಸಾವಿರ ಖೈದಿಗಳಿದ್ದಾರೆ. ಶಶಿಕಲಾರಂತ ಪೊಲಿಟಿಕಲ್ ಖೈದಿಯಿಂದ ಹಿಡಿದು, ಪಿಕ್​ಪಾಕೆಟರ್​, ಕೊಲೆಗಡುಕರು, ದರೋಡೆಕೋರರು, ಅತ್ಯಾಚಾರಿಗಳು ಎಲ್ಲರೂ ಇರೋದು ಈ ಜೈಲಿನಲ್ಲೇ.

ಜೈಲಿನ ಒಂದೇ ಒಂದು ನಿಯಮವೂ ಇಲ್ಲಿ ಪಾಲನೆಯಾಗಲ್ಲ..!

ಅದಕ್ಕೆ ಈ ದೃಶ್ಯಗಳೇ ಸಾಕ್ಷಿ. ನೀವೀಗ ನೋಡ್ತಾ ಇರೋದು ಸಂಜೆ ಮತ್ತು ರಾತ್ರಿಯ ದೃಶ್ಯಗಳು. ನಿಮಗೆ ಗೊತ್ತಿರಲಿ, ರಾತ್ರಿ 7 ಗಂಟೆಯ ನಂತರ, ಒಬ್ಬನೇ ಒಬ್ಬ ಖೈದಿಯೂ ಹೊರಗೆ ಬರೋ ಹಾಗಿಲ್ಲ. ಎಲ್ಲರೂ ಅವರವರ ಸೆಲ್​ನಲ್ಲಿರಬೇಕು. ಆದರೆ, ಇಲ್ಲಿ ಅದ್ಯಾವುದೂ ಪಾಲನೆಯಾಗಲ್ಲ. ಪರಪ್ಪನ ಅಗ್ರಹಾರ ಜೈಲು ಕೂಡಾ ಎಂಜಿ ರೋಡ್​ನಂತೆ, ಗಾಂಜಾ, ಹುಕ್ಕಾ ಬಾರುಗಳಂತೆ, ಪಬ್ಬುಗಳಂತೆ ಬದಲಾಗಿ ಹೋಗುತ್ತೆ. ಪೊಲೀಸರ ಕಣ್ಣೆದುರಿನಲ್ಲೇ..

ಇಷ್ಟೇ ಪರಪ್ಪನ ಅಗ್ರಹಾರದ ಕಾನೂನು. ಡಿಐಜಿ ರೂಪಾ ಹೇಳ್ತಿರೋದು ಇದನ್ನೇ. ಡಿಜಿಪಿ ಸತ್ಯನಾರಾಯಣ ರಾವ್ ಹಂಗೆಲ್ಲ ಇಲ್ಲ. ಎಲ್ಲವೂ ಸರಿಯಾಗಿದೆ ಅಂತಾ ಹೇಳ್ತಿರೋದು ಇದೇ ಜೈಲಿನ ಬಗ್ಗೆ.ಈಗ ಎಲ್ಲ ಬಯಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸಕೋಟೆಗೆ ಕಾಂಗ್ರೆಸ್‌ ಅವಧಿಯಲ್ಲೇ ಮೆಟ್ರೋ, ಶೀಘ್ರದಲ್ಲೇ ಸಿಗಲಿದೆಯೇ ಸಿಹಿ ಸುದ್ದಿ, ಯಾವ ಮಾರ್ಗ ವಿಸ್ತರಣೆ?
ಮೀಸಲಾತಿ ಯಾರಪ್ಪನ ಸ್ವತ್ತಲ್ಲ; ಕುರುಬರ ST ಸೇರ್ಪಡೆ ವಿಚಾರ, ವಿಎಸ್ ಉಗ್ರಪ್ಪ ಮಹತ್ವದ ಹೇಳಿಕೆ!