
ಸಮಾಜ ಕಲ್ಯಾಣ ಇಲಾಖೆ ಗಿರಿಜನ ಹಾಗೂ ಆದಿವಾಸಿ ಮಕ್ಕಳ ಕಲ್ಯಾಣಕ್ಕಾಗಿ ಸ್ಥಾಪಿಸಿರೋ ಆಶ್ರಮ ಶಾಲೆಗಳು ಅಕ್ಷರಶ: ಅನಾಥ ಶಾಲೆಗಳಾಗಿವೆ. ಅಲ್ಲಿ ಶಿಕ್ಷಣ ಮರೀಚಿಕೆಯಾಗಿದ್ದು, ಅವು ಗಿರಿಜನರ ಮಕ್ಕಳ ಗಂಜೀಕೇಂದ್ರವಾಗಿವೆ. ಇಲ್ಲಿನ ಏಳನೇ ತರಗತಿ ಮಕ್ಕಳಿಗೂ ಅಕ್ಷರ ಜ್ಞಾನವಿಲ್ಲ ಅನ್ನೋದನ್ನ ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ವರದಿ ಮೂಲಕ ಬಿಚ್ಚಿಟ್ಟಿತ್ತು.
ಈ ವರದಿ ಪ್ರಸಾರ ಬಳಿಕ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಅವ್ಯವಸ್ಥೆಯನ್ನ ಸರಿಪಡಿಸೋ ಭರವಸೆ ನೀಡಿದರು. ಅದರಂತೆ ಇಲಾಖೆಯ ಉಪಕಾರ್ಯದರ್ಶಿ ಶಂಭುಲಿಂಗ ಅವರು ಜಿಲ್ಲಾಮಟ್ಟದ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ಪರಿಶಿಷ್ಟ ಪಂಗಡಗಳ ನಿರ್ದೇಶಕರನ್ನ ಈ ಅವ್ಯವಸ್ಥೆಗೆ ಜವಾಬ್ದಾರರನ್ನಾಗಿಸಿ, ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಲು ಆದೇಶಿಸಿದ್ದಾರೆ. ತಪ್ಪಿದ್ದಲ್ಲಿ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.