ಸೊಹ್ರಾಬ್ ಕೇಸಿನ ಜಡ್ಜ್ ಸಾವಿನ ಬಗ್ಗೆ ಅನುಮಾನ

Published : Nov 21, 2017, 08:18 PM ISTUpdated : Apr 11, 2018, 12:53 PM IST
ಸೊಹ್ರಾಬ್ ಕೇಸಿನ ಜಡ್ಜ್ ಸಾವಿನ ಬಗ್ಗೆ ಅನುಮಾನ

ಸಾರಾಂಶ

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆಪಾದಿತರಾಗಿದ್ದ ಶಂಕಿತ ಉಗ್ರ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ನ್ಯಾಯಾಧೀಶ ಬ್ರಿಜ್‌ಗೋಪಾಲ ಲೋಯಾ ಅವರು ಸಾವನ್ನಪ್ಪಿ 3 ವರ್ಷವಾದ ಬಳಿಕ ಈ ಬಗ್ಗೆ ಈಗ ಅನುಮಾನಗಳು ಸೃಷ್ಟಿಯಾಗಿವೆ.

ಮುಂಬೈ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆಪಾದಿತರಾಗಿದ್ದ ಶಂಕಿತ ಉಗ್ರ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ನ್ಯಾಯಾಧೀಶ ಬ್ರಿಜ್‌ಗೋಪಾಲ ಲೋಯಾ ಅವರು ಸಾವನ್ನಪ್ಪಿ 3 ವರ್ಷವಾದ ಬಳಿಕ ಈ ಬಗ್ಗೆ ಈಗ ಅನುಮಾನಗಳು ಸೃಷ್ಟಿಯಾಗಿವೆ.

ಮುಂಬೈನ ಸಿಬಿಐ ಕೋರ್ಟ್ ವಿಶೇಷ ನ್ಯಾಯಾಧೀಶರಾಗಿದ್ದ ಲೋಯಾ ಅವರು 2014ರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ಹೇಳಲಾಗಿತ್ತು. ನಾಗಪುರಕ್ಕೆ ಅವರು ಮದುವೆಯೊಂದಕ್ಕೆ ಹೋದಾಗ ಈ ಘಟನೆ ನಡೆದಿತ್ತು.

ಆದರೆ ‘ಕಾರವಾನ್’ ಎಂಬ ಪತ್ರಿಕೆಯಲ್ಲಿ ಅವರ ಸಾವಿನ ಸಂಬಂಧ ಈಗ ವಿಶೇಷ ವರದಿಯೊಂದು ಪ್ರಕಟವಾಗಿದ್ದು, ಅನುಮಾನಗಳನ್ನು ಪ್ರಸ್ತಾಪಿಸಿದೆ.

ಕುಟುಂಬದ ಸದಸ್ಯರಿಗೆ ಲೋಯಾ ಅವರ ಸಾವಿನ ಸುದ್ದಿ ಗೊತ್ತಾಗಿದ್ದು ಆರೆಸ್ಸೆಸ್ ಕಾರ್ಯಕರ್ತ ಈಶ್ವರ ಬಹೇತಿ ಎಂಬಾತನಿಂದ. ಸಾವಿನ ಸುದ್ದಿಯನ್ನು ಗುರುತು-ಪರಿಚಯ ಇಲ್ಲದ ಆರೆಸ್ಸೆಸ್ ಕಾರ್ಯಕರ್ತನೊಬ್ಬ ಹೇಗೆ ತಿಳಿಸಿದ ಎಂದು ಪ್ರಶ್ನೆ ಎತ್ತಿದ್ದಾರೆ.

ಅಲ್ಲದೆ, ಅವರ ಬಂಧು ಎಂದು ಹೇಳಿಕೊಂಡು ಮರಣೋತ್ತರ ದಾಖಲೆಗೆ ಸಹಿ ಹಾಕಿದ ಲೋಯಾ ಎಂಬ ಬಂಧು ನಮಗಿಲ್ಲ ಎಂದಿದ್ದಾರೆ ಕುಟುಂಬಸ್ಥರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಿಡ್ಲಘಟ್ಟದ 'ಹನಿ' ಹಿಂದೆ ಹೋದ ಚಿಕ್ಕಬಳ್ಳಾಪುರದ ಬಾಲಾಜಿ, ಟ್ರ್ಯಾಪ್‌ ಆಗಿದ್ದಕ್ಕೆ ಜೀವನವನ್ನೇ ಮುಗಿಸಿದ!
Amur Falcon birds: ಭಾರತದಿಂದ ಜಿಂಬಾಬ್ವೆಗೆ ಕೇವಲ 6 ದಿನಗಳಲ್ಲಿ 6,100 ಕಿ.ಮೀ ಹಾರಿದ ಪುಟ್ಟ ಹಕ್ಕಿಗಳು!