
ನವದೆಹಲಿ: ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀ ಯರ ರಕ್ಷಣೆ ಮಾಡುವಲ್ಲಿ ಸಖತ್ ಫೇಮಸ್ ಆಗಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಗುರುವಾರ ತಮ್ಮ ಟ್ವೀಟರ್ ಹಿಂಬಾಲಕರೊಬ್ಬರಿಗೆ ನೀಡಿದ ಟಾಂಗ್ ಭರ್ಜರಿ ಫೇಮಸ್ ಆಗಿದೆ.
ಕರಣ್ ಎಂಬಾತ ಸುಷ್ಮಾಗೆ ನಾನು ಮಂಗಳ ಗ್ರಹದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. 987 ದಿನಗಳ ಹಿಂದೆ ಮಂಗಳಯಾನದಲ್ಲಿ ಕಳುಹಿಸಿದ್ದ ಆಹಾರ ಮುಗಿದಿದೆ. ಮಂಗಳಯಾನ 2 ಯಾವಾಗ ಎಂದು ಟ್ವೀಟರ್ನಲ್ಲಿ ಸಂದೇಶ ರವಾನಿಸಿದ್ದ.
ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿ ರುವ ಸುಷ್ಮಾ, ಭಾರತೀಯರು ಯಾವ ಗ್ರಹದಲ್ಲಿ ಸಿಕ್ಕಿಬಿದ್ದರೂ, ನಮ್ಮ ದೂತಾವಾಸ ಅವರನ್ನು ರಕ್ಷಿಸಲಿದೆ ಎಂದು ಟಾಂಗ್ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.