ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವ್ಯಕ್ತಿಯೊಬ್ಬರಿಗೆ ಖಡಕ್ ಉತ್ತರ ನೀಡಿದ್ದಾರೆ. ಈ ಮೂಳಕ ಟ್ವಿಟರ್ ನಲ್ಲಿ ಅಗತ್ಯವಿಲ್ಲದನ್ನು ಹಾಕಿ ಟ್ಯಾಗ್ ಮಾಡುವವರಿಗೂ ಝಾಡಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಈ ಸುದ್ದಿ ಓದಿ...
ನವದೆಹಲಿ[ಆ.9] ನಾನು ಇಂಡೊನೇಷಿಯಾದ ಬಾಲಿಗೆ ಪ್ರವಾಸ ಮಾಡಬೇಕು ಎಂದುಕೊಂಡಿದ್ದೇನೆ.. ಸುರಕ್ಷಿತವೇ? ಎಂದು ಸೂಶೀಲ್ ಎಂಬುವರು ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರ ನೀಡಿದ ಸುಷ್ಮಾ ‘ನಾನು ಜ್ವಾಲಾಮುಖಿಯನ್ನು ಸಂಪರ್ಕ ಮಾಡಿ ತಿಳಿಸುತ್ತೇನೆ’ ಎಂದಿದ್ದರು.
11 ಸಾವಿರಕ್ಕೂ ಅಧಿಕ ಮಂದಿ ಈ ಟ್ವೀಟ್ ಲೈಕ್ ಮಾಇದ್ದು ಎರಡು ಸಾವಿರಕ್ಕೂ ಅಧಿಕ ಮಂದಿ ರೀ ಟ್ವೀಟ್ ಮಾಡಿದ್ದಾರೆ. ಭಾರತದ ರಾಯಭಾರ ಕಚೇರಿ ಟ್ಯಾಗ್ ಮಾಡಿದ್ದ ವ್ಯಕ್ತಿಗೆರ ಮುಟ್ಟಿ ನೋಡಿಕೊಳ್ಳುವಂತಹ ಪ್ರತಿಕ್ರಿಯೆ ವಿದೇಶಾಂಗ ಸಚಿವರಿಂದ ಬಂದಿದೆ.
I will have to consult the volcano there. https://t.co/bv2atzWtZg
— Sushma Swaraj (@SushmaSwaraj)