
ನವದೆಹಲಿ[ಸೆ.22]: ದೇಶದ ಸರ್ವೋಚ್ಚ ನ್ಯಾಯಾಲಯ ಐವರು ಸದಸ್ಯರಿರುವ ಕಾಯಂ ಸಾಂವಿಧಾನಿಕ ಪೀಠ ಹೊಂದಬೇಕು ಎಂಬ ಸಂವಿಧಾನಶಿಲ್ಪಿಗಳ ಕನಸು ನನಸಾಗುವ ದಿನಗಳು ಹತ್ತಿರವಾಗಿವೆ. 70 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಯಂ ಸಾಂವಿಧಾನಿಕ ಪೀಠ ಸ್ಥಾಪಿಸುವ ಅವಕಾಶ ಸುಪ್ರೀಂಕೋರ್ಟ್ಗೆ ಲಭ್ಯವಾಗಿದೆ.
1950ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ 8 ನ್ಯಾಯಾಧೀಶರು ಇದ್ದರು. ಇದೀಗ ಕೇಂದ್ರ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ನ್ಯಾಯಾಧೀಶರ ಸಂಖ್ಯೆ 34ಕ್ಕೇರಿಕೆಯಾಗಿದೆ. ಆ ಹುದ್ದೆಗೆ ನ್ಯಾಯಮೂರ್ತಿಗಳ ನೇಮಕವೂ ಮುಕ್ತಾಯವಾಗಿದೆ. ಹೀಗಾಗಿ ಅ.1ರಿಂದ ಪಂಚಸದಸ್ಯರನ್ನು ಒಳಗೊಂಡ ಕಾಯಂ ಸಾಂವಿಧಾನಿಕ ಪೀಠ ಸ್ಥಾಪನೆ ಕುರಿತು ನಿರ್ಧಾರ ಕೈಗೊಳ್ಳುವ ಅವಕಾಶ ಮುಖ್ಯ ನ್ಯಾಯಮೂರ್ತಿಗಳಿಗೆ ಲಭಿಸಿದೆ.
ಈಗಿನ ಕಾರ್ಯವಿಧಾನಗಳ ಪ್ರಕಾರ, ದ್ವಿಸದಸ್ಯ ಪೀಠದ ವಿಚಾರಣೆ ವೇಳೆ ಕಾನೂನಿನ ಮಹತ್ವದ ಪ್ರಶ್ನೆಗಳು ಎದುರಾದರೆ ಅದನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಲಾಗುತ್ತದೆ. ತೀರಾ ಮಹತ್ವದ ಪ್ರಕರಣಗಳನ್ನು ತ್ರಿಸದಸ್ಯ ಪೀಠ ಪಂಚ ಸದಸ್ಯ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡುತ್ತದೆ. ಬಾಕಿ ಇರುವ ಪ್ರಕರಣಗಳು, ನ್ಯಾಯಮೂರ್ತಿಗಳ ಸಮಯಾವಕಾಶ ನೋಡಿಕೊಂಡು ಪಂಚ ಸದಸ್ಯ ಪೀಠಕ್ಕೆ ಮುಖ್ಯ ನ್ಯಾಯಮೂರ್ತಿಗಳು ನ್ಯಾಯಾಧೀಶರನ್ನು ನೇಮಕ ಮಾಡುತ್ತಾರೆ. ಈ ಪೀಠ ರಚನೆ ಎಂಬುದು ಯಾವುದೇ ಮುಖ್ಯ ನ್ಯಾಯಮೂರ್ತಿಗೆ ಸವಾಲಿನ ಕೆಲಸವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.