ಏ. 01ರಿಂದ ಬಿ.ಎಸ್-III ಮಾದರಿಯ ವಾಹನಗಳ ಮಾರಾಟ ನಿಷೇಧಿಸಿದ ಸುಪ್ರೀಂ

Published : Mar 29, 2017, 12:59 AM ISTUpdated : Apr 11, 2018, 01:07 PM IST
ಏ. 01ರಿಂದ ಬಿ.ಎಸ್-III ಮಾದರಿಯ ವಾಹನಗಳ ಮಾರಾಟ ನಿಷೇಧಿಸಿದ ಸುಪ್ರೀಂ

ಸಾರಾಂಶ

ಪರಿಸರ ಹಾಗೂ ಜನರ ಹಿತದೃಷ್ಟಿಯಿಂದ ಸುಪ್ರೀಂಕೋರ್ಟ್ ಈ ತಿರ್ಮಾನ ತೆಗೆದುಕೊಂಡಿದೆ. ಸುಪ್ರೀಂ ಆದೇಶದಿಂದ ಕಾರು ತಯಾರಿಕಾ ಕಂಪನಿಗಳಿಗೆ ಹೊಡೆತ ಬಿದ್ದಿದೆ . ವ್ಯವಹಾರಕ್ಕಿಂತ ಜನರ ಆರೋಗ್ಯವೇ ಮುಖ್ಯ ಎಂದು ಸುಪ್ರೀಂಕೋರ್ಟ್​ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ನವದೆಹಲಿ (ಮಾ.29): ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಬಿ.ಎಸ್-4 (ಭಾರತ್ ಸ್ಟೇಜ್-4) ನಿಯಮಗಳನ್ನು ಜಾರಿಗೆ ತರವುದು ಬಹಳ ಮುಖ್ಯವೆಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್ , ಏ.1ರಿಂದ ಬಿ.ಎಸ್-III ಮಾದರಿಯ ವಾಹನಗಳ ಮಾರಾಟವನ್ನು ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದೆ.

ಏ.1ರ ಬಳಿಕ ಬಿ.ಎಸ್-III ಮಾದರಿಯ ಯಾವುದೇ ವಾಹನಗಳನ್ನು ನೋಂದಾಯಿಸುವಂತಿಲ್ಲವೆಂದೂ, ಅದಕ್ಕಿಂತ ಮುಂಚೆ ಮಾರಲ್ಪಟ್ಟ ವಾಹನಗಳಿಗೆ ಹೊಸ ನಿಯಮ ಅನ್ವಯಿಸುವುದಿಲ್ಲವೆಂದು ಕೋರ್ಟ್ ಹೇಳಿದೆ.

ಪರಿಸರ ಹಾಗೂ ಜನರ ಹಿತದೃಷ್ಟಿಯಿಂದ ಸುಪ್ರೀಂಕೋರ್ಟ್ ಈ ತಿರ್ಮಾನ ತೆಗೆದುಕೊಂಡಿದೆ. ಸುಪ್ರೀಂ ಆದೇಶದಿಂದ ಕಾರು ತಯಾರಿಕಾ ಕಂಪನಿಗಳಿಗೆ ಹೊಡೆತ ಬಿದ್ದಿದೆ . ವ್ಯವಹಾರಕ್ಕಿಂತ ಜನರ ಆರೋಗ್ಯವೇ ಮುಖ್ಯ ಎಂದು ಸುಪ್ರೀಂಕೋರ್ಟ್​ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಬಿ.ಎಸ್-III ವಾಹನಗಳಿಂದ ಅತೀಯಾದ ವಾಯ್ಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಉಂಟಾಗುತ್ತಿರುವ ದೃಷ್ಟಿಯಿಂದ ಬಿಎಸ್ ವಾಹನಗಳಿಗೆ ತಡೆ ನೀಡಲಾಗಿದೆ. ಬಿ.ಎಸ್-III ವಾಹನಗಳಿಂದ ಶೇ.80 ರಷ್ಟು ಹೆಚ್ಚು ವಾಯ್ಯು ಮಾಲಿನ್ಯವಾಗುತ್ತದೆ ಎಂದು ಹೇಳಲಾಗಿದೆ.

ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಇದು ಪಬಹಳ ಮುಖ್ಯವಾಗಿದಯೆಂದು ಸುಪ್ರೀಂ ಅಭಿಪ್ರಾಯಪಟ್ಟಿದೆ.

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ಸ್ ಮ್ಯಾನುಫ್ಯಾಕ್ಚರ್ಸ್ (SIAM) ಪ್ರಕಾರ ಭಾರತದಲ್ಲಿ 8.2 ಲಕ್ಷ ಬಿ.ಎಸ್-III ಮಾದರಿಯ ವಾಹನಗಳ ದಾಸ್ತಾನು ಇದೆ. , ಅವುಗಳಲ್ಲಿ 6 ಲಕ್ಷಕ್ಕಿಂತಲೂ ಹೆಚ್ಚು ದ್ವಿಚಕ್ರ ವಾಹನಗಳಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು 12 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ.

ಸುಪ್ರೀಂ ಕೋರ್ಟ್ ಆದೇಶದಿಂದ ಸುಮಾರು 20 ಸಾವಿರ ವರ್ತಕರಿಗೆ ಭಾರೀ ನಷ್ಟವಾಗಲಿದೆ ಎಂದು ವರ್ತಕರ ಸಂಘವು ಹೇಳಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾ ಚೆನ್ನಾಗಿಲ್ಲ, ನಾ ಬಿಳಿ ಇಲ್ಲ, ನನ್ನ ಕುರೂಪಿ ಅಂತಾರೆ: ಪುಟ್ಟ ಮಗಳ ಅಳು ಕೇಳಲಾಗದೇ ನೆಟ್ಟಿಗರ ಸಲಹೆ ಕೇಳಿದ ತಾಯಿ
ಮೈಸೂರು ಕೆನರಾ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಬಂಗಾರಕ್ಕೆ ಕನ್ನ! 85 ಗುಂಡು ಕೊಟ್ಟರೆ 77 ಮಾತ್ರ ವಾಪಸ್