ಗೃಹ ಸಚಿವರೇ, ನಿಮ್ಮ ಇಲಾಖೆಯವರಿಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲ್ವಂತೆ!

Published : Sep 22, 2017, 09:59 PM ISTUpdated : Apr 11, 2018, 01:02 PM IST
ಗೃಹ ಸಚಿವರೇ, ನಿಮ್ಮ ಇಲಾಖೆಯವರಿಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲ್ವಂತೆ!

ಸಾರಾಂಶ

ಹಗಲಿರುಳು ಸಮಾಜ ಕಾಯುವ ಪೊಲೀಸರಿಗೆ ಈಗ ಸಮಸ್ಯೆ ಎದುರಾಗಿದೆ. ಪೊಲೀಸರು ಅನಾರೋಗ್ಯಕ್ಕೆ ತುತ್ತಾದರೆ  ಬೆಂಗಳೂರಿನ ಯಾವುದೇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡವುದಿಲ್ಲವಂತೆ! ಕಾರಣ ಸರ್ಕಾರದ ಭ್ರಷ್ಟ ಅಧಿಕಾರಿಗಳ ನಿರ್ಲಕ್ಷ್ಯ. ಅಷ್ಟಕ್ಕೂ, ರಾಜ್ಯದ ರಕ್ಷಕರಿಗೆ,ಗಂಡಾಂತರ ಎದುರಾಗಿರೋದು ಯಾಕೆ..? ಖಾಸಗಿ ಆಸ್ಪತ್ರೆಗಳು ಸರ್ಕಾರದ ಮೇಲೆ ಮುನಿಸಿಕೊಂಡಿರೋದು ಯಾಕೆ..?

ಬೆಂಗಳೂರು (ಸೆ.22): ಹಗಲಿರುಳು ಸಮಾಜ ಕಾಯುವ ಪೊಲೀಸರಿಗೆ ಈಗ ಸಮಸ್ಯೆ ಎದುರಾಗಿದೆ. ಪೊಲೀಸರು ಅನಾರೋಗ್ಯಕ್ಕೆ ತುತ್ತಾದರೆ  ಬೆಂಗಳೂರಿನ ಯಾವುದೇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡವುದಿಲ್ಲವಂತೆ! ಕಾರಣ ಸರ್ಕಾರದ ಭ್ರಷ್ಟ ಅಧಿಕಾರಿಗಳ ನಿರ್ಲಕ್ಷ್ಯ. ಅಷ್ಟಕ್ಕೂ, ರಾಜ್ಯದ ರಕ್ಷಕರಿಗೆ,ಗಂಡಾಂತರ ಎದುರಾಗಿರೋದು ಯಾಕೆ..? ಖಾಸಗಿ ಆಸ್ಪತ್ರೆಗಳು ಸರ್ಕಾರದ ಮೇಲೆ ಮುನಿಸಿಕೊಂಡಿರೋದು ಯಾಕೆ..?

 ಆಡಳಿತರೂಢಾ  ಸರ್ಕಾರ ವರ್ಷಕ್ಕೆ ಒಂದರಂತೆ ಯೋಜನೆಗಳನ್ನ ಜಾರಿ ಮಾಡುತ್ತಲೇ ಬಂದಿದೆ. ಅದರಂತೆ ರಾಜ್ಯದ ಪೊಲೀಸ್​ ಸಿಬ್ಬಂದಿಗಳಿಗಾಗಿ 'ಆರೋಗ್ಯ ಭಾಗ್ಯ' ಎಂಬ ಯೋಜನೆ ಜಾರಿ ಮಾಡಿತ್ತು. ಪೊಲೀಸ್​ ಸಿಬ್ಬಂದಿಗಳಿಗೆ ಉಚಿತ ಚಿಕಿತ್ಸೆ ಪಡೆದುಕೊಳ್ಳಲು ಆರಂಭವಾದ ಈ  ಯೋಜನೆ , ಈಗ ಕಣ್ಮರೆಯಾಗುವ ಅಂಚಿನಲ್ಲಿದೆ. ಸರಿಯಾಗಿ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಬಿಲ್​ ಕಟ್ಟದ ಕಾರಣ ಆರೋಗ್ಯ ಭಾಗ್ಯದಡಿ ಬರುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಯವರು ಪ್ರವೇಶ ನೀಡುತ್ತಿಲ್ಲ. ಆಸ್ಪತ್ರೆಯ ನೋಟೀಸ್​ ಬೋರ್ಡ್​ಗಳಲ್ಲೇ ಆರೋಗ್ಯ ಭಾಗ್ಯ ಯೋಜನೆ ಸ್ಥಗಿತ ಮಾಡಲಾಗಿದೆ ಎಂದು ಹಾಕಲಾಗಿದೆ.

ಸುವರ್ಣನ್ಯೂಸ್​​ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಪೊಲೀಸರ ಆರೋಗ್ಯ ಭಾಗ್ಯದ ಅಸಲಿಯತ್ತು ಹೊರಬಿದ್ದಿದೆ. ಬೆಂಗಳೂರಿನ ಸೆಂಟ್​ ಫಿಲೋಮಿನಾ ಆಸ್ಪತ್ರೆ, ಎಚ್​ಸಿಜಿ ಕ್ಯಾನ್ಸರ್​ ಆಸ್ಪತ್ರೆ, ಹೆಬ್ಬಾಳದ ಅಸ್ಟರ್​ ಸಿಎಂಐ ಆಸ್ಪತ್ರೆಯಲ್ಲಿ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ, ಯಾವುದೇ ಪೊಲೀಸ್ರಿಗೆ ಚಿಕಿತ್ಸೆ ನೀಡುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಆಸ್ಪತ್ರೆಗಳಿಗೆ ಕಟ್ಟಬೇಕಿದ ಹಣವನ್ನ  ಸರ್ಕಾರದ ಕಟ್ಟದೆ ಇರುವ ಕಾರಣ, ಆಸ್ಪತ್ರೆಗಳಲ್ಲಿ ಆರೋಗ್ಯ ಭಾಗ್ಯ ಕಾರ್ಡ್ ಹೊಂದಿದ ಪೊಲೀಸ್​ರಿಗೆ ಚಿಕಿತ್ಸೆ ಸಿಗುತ್ತಿಲ್ಲ.

ಭ್ರಷ್ಟಾಚರವನ್ನ  ಕಂಡುಹಿಡಿಯೋ ಇಲಾಖೆಯಲ್ಲೇ  ಭ್ರಷ್ಟಾಚಾರ ನಡೆಯುತ್ತಿದೆ. ಆಸ್ಪತ್ರೆಗಳಿಗೆ ಕಟ್ಟಬೇಕಿರುವ ಹಣವನ್ನ ಕಟ್ಟದೆ , ಭ್ರಷ್ಟ ಅಧಿಕಾರಿಗಳು ಪೊಲೀಸರ ಜೀವದ ಜೊತೆ ಆಟವಾಡುತ್ತಿದ್ದಾರೆ. ಈಗಲಾದ್ರೂ ಗೃಹ ಸಚಿವರು ಎಚ್ಚೆತ್ತುಕೊಂಡು ತಮ್ಮ ಇಲಾಖೆಯ ಭ್ರಷ್ಟಾಚಾರವನ್ನ ಸರಿಪಡಿಸುವ ಅಗತ್ಯವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಾಮರಾಜನಗರದಲ್ಲಿ ಬೇಟೆಗಾರರ ಬಂದೂಕಿನ ಸದ್ದು: ಚಿರತೆ, ನವಿಲು, ಕಾಡುಹಂದಿಗಳೇ ಟಾರ್ಗೆಟ್!
ಬೊಂಡಿ ಬೀಚ್ ಗುಂಡಿನ ದಾಳಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಕ್ರಿಕೆಟಿಗ ವಾನ್, ಭಯಾನಕ ಘಟನೆ