
ನವದೆಹಲಿ(ಜು.31): ಶ್ರೀಮಂತರು ತಮ್ಮ ಬಳಿ ಇರುವ ಸಂಪತ್ತಿನ ಪ್ರದರ್ಶನ, ಹೊಸ ವಿನ್ಯಾಸ ಉಡುಗೆ ಖರೀದಿಸುವುದು ಸಾಮಾನ್ಯ. ಆದರೆ, ಭಾರತದ ಶ್ರೀಮಂತ ಮಹಿಳೆಯರ ಪೈಕಿ ಒಬ್ಬರಾದ ಇನ್ಫೋಸಿಸ್ ಫೌಂಡೇಶನ್ನ ಮುಖ್ಯಸ್ಥೆಯಾಗಿರುವ ಸುಧಾಮೂರ್ತಿ ಈ ಮಾತಿಗೆ ಅಪವಾದ.
ಕಾಶಿಗೆ ಹೋಗುವ ಮುನ್ನ ಸೀರೆ ಖರೀದಿಸಿದ್ದೇ ಕೊನೆ. 21 ವರ್ಷಗಳಲ್ಲಿ ಅವರು ತಮಗಾಗಿ ಹೊಸ ಸೀರೆಯನ್ನೇ ಖರೀದಿಸಿಲ್ಲ. ಯಾವತ್ತೂ ಶಾಪಿಂಗ್ಗೆ ಹೋಗಿಲ್ಲ. ತಮಗೆ ಬೇಕಾದ ಕೇವಲ ಅತ್ಯಗತ್ಯ ವಸ್ತುಗಳನ್ನು ಮಾತ್ರ ಖರೀದಿಸುತ್ತಿದ್ದಾರೆ.
ಸಾಮಾನ್ಯವಾಗಿ ಕಾಶಿಗೆ ಹೋದ ಸಂದರ್ಭದಲ್ಲಿ ಜನರು ತಮಗೆ ಇಷ್ಟವಾದ ಒಂದು ವಸ್ತುವನ್ನು ತ್ಯಜಿಸುವ ಸಂಪ್ರದಾಯವಿದೆ. ಅದೇ ರೀತಿ ಕಾಶಿಯಲ್ಲಿ ಪವಿತ್ರ ಸ್ನಾನ ಮಾಡುವಾಗ ಸುಧಾಮೂರ್ತಿ ಅವರು ಸೀರೆ ಖರೀದಿಸುವುದನ್ನು ಬಿಡುವ ನಿರ್ಧಾರಕ್ಕೆ ಬಂದಿದ್ದರು. ಅದನ್ನೂ ಇದುವರೆಗೂ ತಪ್ಪದೇ ಸುಧಾಮೂರ್ತಿ ಪಾಲಿಸಿಕೊಂಡು ಬಂದಿದ್ದಾರಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.