ಮುಖ್ಯಮಂತ್ರಿಯವರಿಗೆ ಕಿಚ್ಚನ ಪತ್ರ: ಯಾವ ಕಾರಣಕ್ಕೆ ಗೊತ್ತೆ ?

Published : Aug 08, 2017, 08:14 PM ISTUpdated : Apr 11, 2018, 12:54 PM IST
ಮುಖ್ಯಮಂತ್ರಿಯವರಿಗೆ ಕಿಚ್ಚನ ಪತ್ರ: ಯಾವ ಕಾರಣಕ್ಕೆ ಗೊತ್ತೆ ?

ಸಾರಾಂಶ

ಮುನ್ನೆಯಷ್ಟೆ ಅಭಿಮಾನಿಗಳಿಗೆ ಪತ್ರ ಬರೆದು ಸುದ್ದಿಯಲ್ಲಿದ್ದ ಸುದೀಪ್ ಈಗ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಅವರು ಬರೆದಿರುವುದು ನಮ್ಮ ಕೆರೆಗಳ ಉಳಿವಿಗಾಗಿ. ಅವರು ಬರೆದಿರುವ ಪತ್ರದ ಸಾರಾಂಶ ಈ ರೀತಿಯಿದೆ ನೋಡಿ

ಗೌರವಾನ್ವಿತ ಮುಖ್ಯಮಂತ್ರಿಗಳು

ಕರ್ನಾಟಕ

ಮಾನ್ಯರೆ,

ನಮ್ಮ ಕೆರೆಗಳೆ ನಮಗೆ ಜೀವನಾಧಾರ. ಪರಿಸರದಿಂದಲೇ ನಮ್ಮೆಲ್ಲರ ಜೀವನ ಹಾಗೂ ಅದರಿಂದಲೇ ಉಸಿರಾಡುತ್ತಿದ್ದೇವೆ.  ಪ್ರತಿಯೊಂದು ಮರ,ಗಿಡ,ಪಕ್ಷಿಗಳು, ಪ್ರಾಣಿಗಳು ಹಾಗೂ ಮಾನವರು ಪರಿಸರದಿಂದ ಬದುಕುತ್ತಿದ್ದಾರೆ. ಆದ ಕಾರಣದಿಂದ ಕೆರೆಗಳನ್ನು ನಾಶಪಡಿಸಿದರೆ ನಮ್ಮ ಪ್ರಕೃತಿಯನ್ನು ನಾಶಪಡಿಸಿದಂತೆ.

ಹೃತ್ಪೂರ್ವಕವಾಗಿ ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುವುದೆಂದರೆ, ಸರ್ಕಾರ ಬತ್ತುತ್ತಿರುವ ಕೆರೆಗಳ ಡಿನೋಟಿಫಿಕೇಷನ್ ಬಗ್ಗೆ ಮರುಪರಿಶೀಲಿಸಿ. ಪ್ರಕೃತಿ ತಾಯಿಯ ಕೋಪಕ್ಕೆ ತುತ್ತಾಗುವುದನ್ನು ನಾವು ತಡೆಯೋಣ. ನಾವು ಈಗಾಗಲೇ ಸಾಕಷ್ಟು ಕಳೆದುಕೊಂಡಿದ್ದೇವೆ. ಇರುವ ಕೆರೆಗಳನ್ನು ನಾವು ಉಳಿಸಿಕೊಳ್ಳೋಣ.

ನಾನು ಒಬ್ಬ ನಟನಾಗಿ ಈ ಪತ್ರ ಬರೆಯದೆ. ಒಬ್ಬ ಸಾಮಾನ್ಯ ವ್ಯಕ್ತಿಯ ಪರವಾಗಿ ಪತ್ರ ಬರೆಯುತ್ತಿದ್ದೇನೆ. ಈ ರಾಜ್ಯದೆಡೆಗೆ, ನಗರದೆಡೆಗೆ, ಇಲ್ಲಿ ವಾಸಿಸುವ ಜನರು ಮತ್ತು ಪ್ರಕೃತಿಯ ಮೇಲಿರುವ ಪ್ರೀತಿಯಿಂದ ಈ ಪತ್ರವನ್ನು ಕಳಕಳಿಯಿಂದ ಬರೆದಿದ್ದೇನೆ.

ವಂದನೆಗಳೊಂದಿಗೆ

ಸುದೀಪ್                  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

PM Modi: ಮತ್ತೆ ದಕ್ಷಿಣದತ್ತ ಮುಖ ಮಾಡಿದ ಪ್ರಧಾನಿ: ರಾಜಕೀಯ ಮಹತ್ವ ಪಡೆದ ಮೋದಿ ನಡೆ
Delhi Air Quality: ನಿಬಂಧನೆಗಳು ಜಾರಿಯಲ್ಲಿದ್ರೂ ಪಾತಾಳಕ್ಕೆ ಕುಸಿದ ದೆಹಲಿ ವಾಯುಗುಣಮಟ್ಟ