ನಾನವನಲ್ಲ ಅವಳು: ಉಡುಪಿಯ ಸುಭಾಷ್ ಲಾವಣ್ಯ ಆದ ಕ್ಷಣ!

Published : Sep 25, 2016, 11:42 PM ISTUpdated : Apr 11, 2018, 12:58 PM IST
ನಾನವನಲ್ಲ ಅವಳು: ಉಡುಪಿಯ ಸುಭಾಷ್ ಲಾವಣ್ಯ ಆದ ಕ್ಷಣ!

ಸಾರಾಂಶ

ಉಡುಪಿ(ಸೆ.26): ಅದು ಆಕೆಯ ಪಾಲಿಗೆ ಅತ್ಯಂತ ನಿರೀಕ್ಷೆಯ ಕ್ಷಣ. ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆಯಾದ ನಿರ್ವಾಣದ 41 ನೇ ದಿನ. ಅಮಂಗಳವೆಂದು ಎಲ್ಲರಿಂದಲೂ ಅವಗಣನೆಗೆ ಒಳಗಾದ ಜೀವವೊಂದು ಮಂಗಳಮುಖಿಯಾದ ಸಂಭ್ರಮ ಅಲ್ಲಿತ್ತು. ಉಡುಪಿಯಲ್ಲಿ ಗಂಡೊಬ್ಬ ಹೆಣ್ಣಾಗಿ ಹೊಸ ಬದುಕು ಪ್ರಾರಂಭಿಸಿದ ನಿರ್ವಾಣ ಆಚರಣೆಯ ಬಗ್ಗೆ ಇಲ್ಲಿದೆ ಒಂದು ಸ್ಟೋರಿ.

ಇಂತವರ ಬದುಕಲ್ಲಿ ಸಂತಸ ತುಂಬಾ ಅಪರೂಪ. ದೇಹಕ್ಕೂ ಭಾವಕ್ಕೂ ಸಂಬಂಧವೇ ಇಲ್ಲದ ಜೀವಕ್ಕೆ ಇದಕ್ಕಿಂತ ಸಂಭ್ರಮದ ದಿನ ಬೇರೊಂದಿಲ್ಲ. ಉಡುಪಿಯ ಕಾರ್ಕಳದ ಸುಭಾಷ್‌ಗೆ ತನ್ನಲ್ಲಿರುವ ಹೆಣ್ತನದ ಅನುಭವವಾಗಿ ಬಹಳ ಕಾಲವಾಗಿತ್ತು.. ತಾನು ಹೆಣ್ಣಾಗಬೇಕೆಂದುಕೊಂಡಿದ್ದ. ಆದರೆ, ಕಾಲ ಕೂಡಿ ಬಂದಿರಲಿಲ್ಲ. ಕೊನೆಗೂ ಸುಭಾಷ್ ಲಾವಣ್ಯ ಆಗಿದ್ದಾಳೆ.

ಮಂಗಳಮುಖಿಯರ ಸಂಪ್ರದಾಯದಂತೆ ಮಲ್ಪೆಯಲ್ಲಿ ನಿರ್ವಾಣ ಪ್ರಕ್ರಿಯೆ ನಡೆಯಿತು. ನಾಡಿನ ಬೇರೆ ಬೇರೆ ಭಾಗಗಳಿಂದ ಸುಮಾರು 70ಕ್ಕೂ ಹೆಚ್ಚು ಮಂಗಳಮುಖಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗುಜರಾಥ್ ನ ಪೇತ್ ರಾಜ್ ಮಾತಾ ಮಂಗಳಮುಖಿಯರಿಗೆ ಆರಾಧ್ಯ ದೇವರು. ಆಕೆಯ ಫೋಟೋದ ಮುಂದೆನೇ ಎಲ್ಲಾ ಸಂಪ್ರದಾಯಗಳು ನಡೆಯುತ್ತೆ.. ಕರಾವಳಿ ಮಂಗಳಮುಖಿಯರ ಗುಂಪಿನ ಮುಖ್ಯಸ್ಥೆ ರಾಣಿ, ಲಾವಣ್ಯ ಪಾಲಿಗೆ ಅಜ್ಜಿ. 41 ದಿನ ಕತ್ತಲಕೋಣೆಯಲ್ಲಿ ಕಳೆದ ನಂತರ ದೇವರ ಪೂಜೆ ಮಾಡಿ, ಅರಿಶಿನ ಹಚ್ಚಿಕೊಂಡು, ಸಮುದ್ರಕ್ಕೆ ಹಾಲೆರೆದು ಬಂದ ಬಳಿಕ ಇವರಿಗೆ ಅಧಿಕೃತ ಮಾನ್ಯತೆ.

ಮಂಗಳಮುಖಿಯರ ಜೀವನದ ಭದ್ರತೆಗೆ ಹೀಗೊಂದು ಆಚರಣೆ, ತಮ್ಮದೇ ಗುಂಪಿನಲ್ಲಿ ಗುರುತಿಸಿಕೊಳ್ಳುವಿಕೆ ಅನಿವಾರ್ಯ. ಸರ್ಕಾರದ ಎಲ್ಲಾ ಬಗೆಯ ಸೌಲಭ್ಯ ವಂಚಿತ ಈ ಗುಂಪು ತಮ್ಮ ಅಸ್ತಿತ್ವಕ್ಕಾಗಿ ಇಂದಿಗೂ ಈ ಶತಮಾನಗಳಷ್ಟು ಹಳೆಯ ಸಂಪ್ರದಾಯಗಳನ್ನು ಉಳಿಸಿಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!