ಬಿಎಂಟಿಸಿ ನೌಕರರಿಗೆ ರಾಜ್ಯ ಸರ್ಕಾರದಿಂದ 2017 ರ ತುಟ್ಟಿ ಭತ್ಯೆ ಘೋಷಣೆ

Published : Mar 01, 2017, 12:30 PM ISTUpdated : Apr 11, 2018, 12:46 PM IST
ಬಿಎಂಟಿಸಿ ನೌಕರರಿಗೆ ರಾಜ್ಯ ಸರ್ಕಾರದಿಂದ 2017 ರ ತುಟ್ಟಿ ಭತ್ಯೆ ಘೋಷಣೆ

ಸಾರಾಂಶ

ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಕೊಡುಗೆಯಾಗಿ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ನೀಡುವ  ಸಿಹಿ ಸುದ್ದಿ ನೀಡಿತ್ತು. ಅದರಂತೆ ಎಲ್ಲಾ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯು ಸಿಕ್ತು. ಆದ್ರೆ,ಅದ್ಯಾವ ಜನ್ಮದಲ್ಲಿ ಬಿಎಂಟಿಸಿ ನೌಕರರು ಪಾಪ ಮಾಡಿದ್ರೋ ಗೊತ್ತಿಲ್ಲ,ಇಲ್ಲಿವರೆಗೂ ತುಟ್ಟಿ ಭತ್ಯೆ ಭಾಗ್ಯ ಸಿಕ್ಕೇ ಇಲ್ಲ. ಈಗ ಮತ್ತೆ ರಾಜ್ಯ ಸರ್ಕಾರ 2017 ರ ತುಟ್ಟಿ ಭತ್ಯೆ ಘೋಷಣೆ ಮಾಡಲು ಹೊರಟ್ಟಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ.

ಬೆಂಗಳೂರು( ಮಾ.01): ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಕೊಡುಗೆಯಾಗಿ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ನೀಡುವ  ಸಿಹಿ ಸುದ್ದಿ ನೀಡಿತ್ತು. ಅದರಂತೆ ಎಲ್ಲಾ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯು ಸಿಕ್ತು. ಆದ್ರೆ,ಅದ್ಯಾವ ಜನ್ಮದಲ್ಲಿ ಬಿಎಂಟಿಸಿ ನೌಕರರು ಪಾಪ ಮಾಡಿದ್ರೋ ಗೊತ್ತಿಲ್ಲ,ಇಲ್ಲಿವರೆಗೂ ತುಟ್ಟಿ ಭತ್ಯೆ ಭಾಗ್ಯ ಸಿಕ್ಕೇ ಇಲ್ಲ. ಈಗ ಮತ್ತೆ ರಾಜ್ಯ ಸರ್ಕಾರ 2017 ರ ತುಟ್ಟಿ ಭತ್ಯೆ ಘೋಷಣೆ ಮಾಡಲು ಹೊರಟ್ಟಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ.

ರಾಜ್ಯ ಸರ್ಕಾರ  ದೀಪಾವಳಿ ಹಬ್ಬಕ್ಕೆ   ಸರ್ಕಾರಿ ನೌಕರರಿಗೆ  ತುಟ್ಟಿ ಭತ್ಯೆಯನ್ನು ಹೆಚ್ಚಿಸುವ ಮೂಲಕ ಬಂಪರ್​ ಕೊಡುಗೆ ನೀಡಿತ್ತು. ಶೇ.4.25ರಷ್ಟು  ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದರಿಂದ ಶೇ.36ರಷ್ಟಿದ್ದ  ಡಿಎ ಶೇ. 40.25ಕ್ಕೆ ಏರಿಕೆಯಾಗಿದೆ ಅಂತಾ ಬಿಎಂಟಿಸಿ ನೌಕರರು ಖುಷ್​ ಆಗಿದ್ರು.ಆದ್ರೆ, ಆ ಸಿಹಿ ಸುದ್ದಿ ಬಿಎಂಟಿಸಿ ನೌಕರರಿಗೆ ಕೇವಲ ಸುದ್ದಿಯಾಗೆ ಉಳಿದಿದೆ.  ರಾಜ್ಯದ ಎಲ್ಲಾ ನೌಕರರಿಗೆ ತುಟ್ಟಿ ಭತ್ಯೆ ನೀಡಲಾಗಿದೆ, ಆದರೆ ಬಿಎಂಟಿಸಿ ನೌಕರರಿಗೆ ಮಾತ್ರ ಇನ್ನೂ ಸಿಕ್ಕಿಲ್ಲ.

ಒಟ್ಟು 35 ಸಾವಿರ ನೌಕರರು ಬಿಎಂಟಿಸಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 2015,2016 ನೇ ಸಾಲಿನಲ್ಲಿ ಸಿಗಬೇಕಾದ ಬೋನಸ್ ಸಿಗದೆ ನೌಕರರು ಪರದಾಡುತ್ತಿದ್ದರು. ಈಗ ತುಟ್ಟಿ ಭತ್ಯೆ ಇಲ್ಲದೆ ಇನ್ನಷ್ಟು​ ತೊಂದರೆಗೆ ಸಿಲುಕಿದ್ದಾರೆ. ನೌಕರರ ಬೆಸಿಕ್​ ವೇತನದ ಆಧಾರದ ಮೇಲೆ ತುಟ್ಟಿ ಭತ್ಯೆ ನೀಡಲಾಗುತ್ತೆ . ಅಂದ್ರೆ, 35 ಸಾವಿರ ಬಿಎಂಟಿಸಿ ನೌಕರರಿಗೆ ತಿಂಗಳಿಗೆ 35 ರಿಂದ 40 ಲಕ್ಷ ರೂಪಾಯಿ ತುಟ್ಟಿ ಭತ್ಯೆಗೆ ಪಾವತಿಸಿ ಬೇಕು. ಆದ್ರೆ ಬಿಎಂಟಿಸಿ ಅಧಿಕಾರಿಗಳು ಆ ಕೆಲಸ ಮಾಡದೇ, ಕಣ್ಮುಚ್ಚಿ ಕುಳತ್ತಿದ್ದಾರೆ. ಇತ್ತ ನೌಕರರು ಬೋನಸ್​ ಇಲ್ಲದೆ ,ತುಟ್ಟಿ ಭತ್ಯೆ ಇಲ್ಲದೆ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ..

 ​ 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ ಮುಸ್ಲಿಂ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!