ರೌಡಿ ಶೀಟರ್'ಗೆ ಸರ್ಕಾರದ ವಿಶೇಷ ಅಭಿಯೋಜಕ ಹುದ್ದೆ..!

Published : Dec 01, 2017, 11:54 AM ISTUpdated : Apr 11, 2018, 12:37 PM IST
ರೌಡಿ ಶೀಟರ್'ಗೆ ಸರ್ಕಾರದ ವಿಶೇಷ ಅಭಿಯೋಜಕ ಹುದ್ದೆ..!

ಸಾರಾಂಶ

ರೌಡಿ ಶೀಟರ್ ಓರ್ವನಿಗೆ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ವಿಶೇಷ ಅಭಿಯೋಜಕ ಹುದ್ದೆ ನೀಡಿರುವ ವಿಚಾರವೀಗ ಬೆಳಕಿಗೆ ಬಂದಿದೆ. ಇದರಿಂದ ಕಳ್ಳನ ಕೈಯಲ್ಲಿ ಗಂಟನ್ನು ನೀಡಿದಂತಾಗಿದೆ.

ಬೆಂಗಳೂರು(ಡಿ.1) ರೌಡಿ ಶೀಟರ್ ಓರ್ವನಿಗೆ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ವಿಶೇಷ ಅಭಿಯೋಜಕ ಹುದ್ದೆ ನೀಡಿರುವ ವಿಚಾರವೀಗ ಬೆಳಕಿಗೆ ಬಂದಿದೆ. ಇದರಿಂದ ಕಳ್ಳನ ಕೈಯಲ್ಲಿ ಗಂಟನ್ನು ನೀಡಿದಂತಾಗಿದೆ.  ಈ ಆಯ್ಕೆ ಪ್ರಕ್ರಿಯೆಯಲ್ಲಿ  ಗೃಹ ಸಚಿವ ರಾಮಲಿಂಗ ರೆಡ್ಡಿ ಅವರೂ ಕೂಡ ಪಾಲ್ಗೊಂಡಿರುವುದು ತಿಳಿದು ಬಂದಿದೆ. ರೌಡಿ ಶೀಟರ್ ಆಗಿದ್ದ ಸುಧಾಕರ್ ಎಂಬ ವ್ಯಕ್ತಿಗೆ ಸರ್ಕಾರವು ಎಸ್'ಪಿಪಿ ಹುದ್ದೆಯನ್ನು ನೀಡಿ  ಕಳೆದ ಜುಲೈ 10ರಂದು  ಆದೇಶ ನೀಡಿದೆ.

ಈ ವ್ಯಕ್ತಿ ವಿರುದ್ಧ ಪುಲಕೇಶಿ ನಗರ ಠಾಣೆಯಲ್ಲಿ ಪ್ರಕರಣಗಳಿದ್ದು, ಈಗಲೂ ಕೂಡ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದಾರೆ ಎನ್ನುವ ಆಘಾತಕಾರಿ ವಿಚಾರವೂ ಕೂಡ ಹೊರಬಿದ್ದಿದೆ.  ರೌಡಿ ಶೀಟರ್ ಸುಧಾಕರ್'ಗೆ ಎಸ್'ಪಿಪಿ ಹುದ್ದೆಯನ್ನು ವಹಿಸಿ ಆದೇಶ ನೀಡಿದ್ದ ವೇಳೆ ಗೃಹ ಖಾತೆಯು ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರ ಬಳಿಯಲ್ಲೇ ಇತ್ತು. ಜೂ.25 ರಂದು ಜಿ ಪರಮೇಶ್ವರ್ ಅವರ ರಾಜೀನಾಮೆ ಅಂಗೀಕಾರವಾಗಿದ್ದು, ಅದಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಖಾತೆಯನ್ನು ತಾವೇ ವಹಿಸಿಕೊಂಡಿದ್ದು. ಸೆಪ್ಟೆಂಬರ್ 1 ರಂದು ರಾಮಲಿಂಗಾ ರೆಡ್ಡಿ ಅವರು ಗೃಹ ಖಾತೆಯನ್ನು ವಹಿಸಿಕೊಂಡಿದ್ದರು. ಸುಧಾಕರ್ ಅವರ ಯಾವುದೇ ಪೂರ್ವಾಪರ ತಿಳಿಯದೇ ಪ್ರಮುಖ ಹುದ್ದೆಯನ್ನು ರೌಡಿಶೀಟರ್ ಕೈಗೆ ವಹಿಸಿದಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಬಸ್ 3 ಕಾರುಗಳ ಮಧ್ಯೆ ಸರಣಿ ಅಪಘಾತ : ನಾಲ್ವರು ಬೆಂಕಿಗಾಹುತಿ
ಕೇಂದ್ರ, ಮೋದಿ ಮಾಡಿದ್ದೆಲ್ಲ ತಪ್ಪು ಎನ್ನಲಾಗದು, Vote Chori ಆರೋಪದಿಂದ ಕಾಂಗ್ರೆಸ್‌ನ ನೈತಿಕತೆ ಕುಸಿತ!