
ಬೆಂಗಳೂರು(ನ.14): ವಿವಾದಿತ ಸ್ಟೀಲ್ ಫ್ಲೈಓವರ್ ವಿರುದ್ಧ ಫೇಸ್ ಬುಕ್ನಲ್ಲಿ ಬರೆದುಕೊಂಡ ಕಲಾಸಿಪಾಳ್ಯ ಇನ್ಸ್ಪೆಕ್ಟರ್ ರಾಘವೇಂದ್ರ ಈಗ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನ.12ರಂದು ಫೇಸ್ಬುಕ್`ನಲ್ಲಿ ಎಲ್ಲಿಗೆ ಬಂತು ನಿಮ್ಮ ಸ್ಟೀಲ್ ಫ್ಲೈಓವರ್ ಕಥೆ’ ‘ಮೋದಿ ಹೊಡೆತಕ್ಕೆ ಸ್ಟೀಲ್ ಫ್ಲೈಓವರ್ ಮಾಯ’ ಹರಿದಾಡಬೇಕಾಗಿದ್ದ, ಹಂಚಬೇಕಾಗಿದ್ದ ಕಪ್ಪುಹಣ ಮಾಯ. ಹೇಗಿದೆ ಗುನ್ನಾ, ಹೋರಾಟಗಾರರೇ ಹೇಳಿಕೊಳ್ಳಿ ನಿಮ್ಮ ಹೋರಾಟಕ್ಕೆ ಸಂದ ಜಯ ಎಂಬ ಸ್ಟೇಟಸ್ ಬರೆದುಕೊಂಡಿದ್ದರು. ರಾಘವೇಂದ್ರರ ಹರಿತ, ವ್ಯಂಗ್ಯಭರಿತ ಬರಹ, ಕಲಾಸಿಪಾಳ್ಯದ ಸ್ಟೇಷನ್ ಮೇಲೆ ಕಣ್ಣಿಟ್ಟರ ಗಮನಸೆಳೆಯಿತು.
ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನೇ ಟೀಕಿಸಿದ ರಾಘವೇಂದ್ರದ ವಿರುದ್ಧ ಗೃಹ ಸಚಿವರು ಕೆಂಡಾಮಂಡಲರಾದರು. ಇನ್ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ತಿಳಿದುಬಂದಿದೆ. ಸರ್ಕಾರವನ್ನು ಟೀಕೆ ಮಾಡಬಾರದೆಂದು ಕಾನೂನಿನಲ್ಲೇ ಇದೆ ಅಂತ ಗುಡುಗಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.