
ಲಕ್ನೋ(ಅ. 09): ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿ ಆಯೋಜಿಸಿದ್ದ ಸಮಾವೇಶದಲ್ಲಿ ನೂಕುನುಗ್ಗಲಾಗಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ಬಿಎಸ್'ಪಿ ಸಂಸ್ಥಾಪಕ ಕಾನ್ಷಿ ರಾಮ್ ಅವರ 10ನೇ ಪುಣ್ಯತಿಥಿ ಅಂಗವಾಗಿ ಕಾನ್ಷಿರಾಮ್ ಸ್ಮಾರಕ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯುತ್ತಿತ್ತು. ಈ ವೇಳೆ ಸಂಭವಿಸಿದ ಈ ದುರ್ಘಟನೆಯಲ್ಲಿ 12ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದೂ ವರದಿಯಾಗಿದೆ. ಸ್ಟೇಡಿಯಂನ ಸ್ಟೇರ್'ಕೇಸ್ ಬಳಿ ನಡೆದು ಬರುವ ವೇಳೆ ಕೆಲ ಜನರು ಆಯತಪ್ಪಿ ಕೆಳಗೆ ಬಿದ್ದದ್ದು ಅವಘಡಕ್ಕೆ ಕಾರಣವೆನ್ನಲಾಗಿದೆ. ಇಬ್ಬರು ಮಹಿಳೆಯರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.. ಮೃತಪಟ್ಟವರಲ್ಲಿ ಒಬ್ಬಾಕೆಯನ್ನು ಬಿಜ್ನೋರ್ ಜಿಲ್ಲೆಯ ಶಾಂತಿ ದೇವಿ(68) ಎಂದು ಗುರುತಿಸಲಾಗಿದೆ.
ಮೈದಾನದ ಬಳಿ ವಿದ್ಯುತ್ ತಂತಿ ಕಿತ್ತು ಬಿದ್ದಿದೆ ಎಂಬ ಗಾಳಿಸುದ್ದಿಯು ಜನರನ್ನು ಆತಂಕಗೊಳಿಸಿತು. ಇದರಿಂದ ಗಾಬರಿಗೊಂಡು ಜನರು ಸಿಕ್ಕಸಿಕ್ಕ ಕಡೆ ಓಡಲು ಆರಂಭಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು ಎಂದು ಹೇಳಲಾಗುತ್ತಿದೆ. ಆದರೆ, ಬಹುಜನ ಸಮಾಜ ಪಕ್ಷದ ಉತ್ತರ ಪ್ರದೇಶ ಘಟಕದ ಮುಖ್ಯಸ್ಥ ರಾಮ್ ಅಚಲ್ ರಾಜಭರ್ ಹೇಳುವ ಪ್ರಕಾರ ಸುಡುಬಿಸಿಲ ಬೇಗೆಯಿಂದ ಮಹಿಳೆಯರು ಮೃತಪಟ್ಟಿದ್ದು, ಯಾವುದೇ ನೂಕುನುಗ್ಗಲಿನಿಂದಲ್ಲ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.