ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರಾ ಶ್ರೀದೇವಿ..? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಅಂಕಲ್..!

Published : Mar 11, 2018, 06:14 PM ISTUpdated : Apr 11, 2018, 12:49 PM IST
ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರಾ ಶ್ರೀದೇವಿ..? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಅಂಕಲ್..!

ಸಾರಾಂಶ

ಚಿತ್ರ ನಿರ್ಮಾಪಕರು ಶ್ರೀದೇವಿ ಸಿನಿಮಾಗೆ ಹಣಹೂಡಿ ಸಾಕಷ್ಟು ಬಾರಿ ಕೈಸುಟ್ಟುಕೊಂಡಿದ್ದರು. ಈ ನಷ್ಟವನ್ನು ತುಂಬಿಕೊಡಲು ಶ್ರೀದೇವಿ ಕೆಲ ಆಸ್ತಿಗಳನ್ನು ಮಾರಾಟ ಮಾಡಿದ್ದರು. ಚಿತ್ರರಂಗಕ್ಕೆ ಗುಡ್'ಬೈ ಹೇಳಿದ್ದ ಶ್ರೀದೇವಿ, ಹಣಕಾಸಿನ ತೊಂದರೆಯಿಂದಾಗಿಯೇ  1997ರಲ್ಲಿ ಮತ್ತೆ 'ಜುದಾಯಿ' ಮೂಲಕ ಬೆಳ್ಳಿತೆರೆಗೆ ಮರಳಿದ್ದರು.

ಸಿನಿಮಾ ರಂಗದ ಮೋಹಕ ತಾರೆ ಶ್ರೀದೇವಿ ದಿಢೀರ್ ಸಾವಿನ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಲೇ ಇದ್ದು, ಇದೀಗ ಮತ್ತೋದು ಅನಿರೀಕ್ಷಿತ ಮಾಹಿತಿ ಹೊರಬಿದ್ದಿದೆ. ಕಳೆದ ತಿಂಗಳ 24ರಂದು ದುಬೈನಲ್ಲಿ ಶ್ರೀದೇವಿ ಅನಿರೀಕ್ಷಿತ ಸಾವಿಗೀಡಗಿದ್ದರು. ಆದರೆ ಇದೀಗ ಶ್ರೀದೇವಿ ಚಿಕ್ಕಪ್ಪ ವೇಣುಗೋಪಾಲ್ ರೆಡ್ಡಿ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದು, ಶ್ರೀದೇವಿ ಸಾಕಷ್ಟು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ.

ಚಿತ್ರ ನಿರ್ಮಾಪಕರು ಶ್ರೀದೇವಿ ಸಿನಿಮಾಗೆ ಹಣಹೂಡಿ ಸಾಕಷ್ಟು ಬಾರಿ ಕೈಸುಟ್ಟುಕೊಂಡಿದ್ದರು. ಈ ನಷ್ಟವನ್ನು ತುಂಬಿಕೊಡಲು ಶ್ರೀದೇವಿ ಕೆಲ ಆಸ್ತಿಗಳನ್ನು ಮಾರಾಟ ಮಾಡಿದ್ದರು. ಚಿತ್ರರಂಗಕ್ಕೆ ಗುಡ್'ಬೈ ಹೇಳಿದ್ದ ಶ್ರೀದೇವಿ, ಹಣಕಾಸಿನ ತೊಂದರೆಯಿಂದಾಗಿಯೇ  1997ರಲ್ಲಿ ಮತ್ತೆ 'ಜುದಾಯಿ' ಮೂಲಕ ಬೆಳ್ಳಿತೆರೆಗೆ ಮರಳಿದ್ದರು.

ಕೆಲ ವರದಿಗಳನ್ನು ಉದಾಹರಣೆಯಾಗಿ ನೀಡಿ ಮಾತನಾಡಿದ ರೆಡ್ಡಿ, ಬೋನಿ ಕಪೂರ್ ನಿರ್ಮಾಣ ಮಾಡಲು ಹೊರಟಿದ್ದ ಚಿತ್ರ ಆರ್ಥಿಕ ಸಂಕಷ್ಟದಿಂದ ತೆರೆಕಾಣಲಿಲ್ಲ. ಆಗ ಕಪೂರ್ ಕುಟುಂಬ ತುಂಬಾ ಆರ್ಥಿಕ ಸಂಕಷ್ಟದಲ್ಲಿತ್ತು. ಆಗ ಶ್ರೀದೇವಿ ಆಸ್ತಿಗಳನ್ನು ಮಾರಾಟ ಮಾಡಿ ಸಾಲ ತೀರಿಸಿದ್ದರು. ಆ ಬಳಿಕವೇ ಅವರ ಬದುಕು ಹಳಿಗೆ ಬಂದಿತ್ತು ಎಂದು ಖಾಸಗಿ ವಾಹಿನಿಯೊಂದಿಗೆ ಮಾಹಿತಿ ಹೊರಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!