ನಲಪಾಡ್'ಗೆ ರಾಜಾತಿಥ್ಯ ನೀಡಿದ ಕಬ್ಬನ್'ಪಾರ್ಕ್ ಪೊಲೀಸರು..!

By Suvarna Web DeskFirst Published Feb 19, 2018, 1:18 PM IST
Highlights

ಠಾಣೆಗೆ ಹಾಜಾರಾಗಿರುವ ಶಾಸಕ ಎನ್ಎ ಹ್ಯಾರಿಸ್ ಪುತ್ರನನ್ನು ಸೆಲ್'ನಲ್ಲಿ ಇಡುವ ಬದಲು ಇನ್ಸ್'ಪೆಕ್ಟರ್ ಚೇಂಬರ್'ನಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಗೂಂಡಾ ವರ್ತನೆ ತೋರಿದ ಆರೋಪಿಗೆ ಜ್ಯೂಸ್ ತಂದು ಕೊಟ್ಟಿದ್ದಾರೆ. ಹಾಗೆಯೇ ಟಿವಿಯಲ್ಲಿ ಹೊರಗಡೆ ನಡೆಯುತ್ತಿರುವ ಘಟನೆಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು(ಫೆ.19): ವಿಧ್ವತ್ ಮೇಲೆ ಹಲ್ಲೆ ಮಾಡಿ 36 ಗಂಟೆಗಳ ಬಳಿಕ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಾಗಿರುವ ಮೊಹಮ್ಮದ್ ನಲಪಾಡ್'ಗೆ ಠಾಣೆಯಲ್ಲಿ ಭರ್ಜರಿ ರಾಜಾತಿಥ್ಯ ಸಿಕ್ಕಿದೆ.

ಠಾಣೆಗೆ ಹಾಜಾರಾಗಿರುವ ಶಾಸಕ ಎನ್ಎ ಹ್ಯಾರಿಸ್ ಪುತ್ರನನ್ನು ಸೆಲ್'ನಲ್ಲಿ ಇಡುವ ಬದಲು ಇನ್ಸ್'ಪೆಕ್ಟರ್ ಚೇಂಬರ್'ನಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಗೂಂಡಾ ವರ್ತನೆ ತೋರಿದ ಆರೋಪಿಗೆ ಜ್ಯೂಸ್ ತಂದು ಕೊಟ್ಟಿದ್ದಾರೆ. ಹಾಗೆಯೇ ಟಿವಿಯಲ್ಲಿ ಹೊರಗಡೆ ನಡೆಯುತ್ತಿರುವ ಘಟನೆಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಗೂಂಡಾ ವರ್ತನೆ ತೋರಿದ ಶಾಸಕನ ಪುತ್ರನನ್ನು ಶೀಘ್ರವೇ ಬಂಧಿಸಬೇಕೆಂದು ವಿರೋಧ ಪಕ್ಷಗಳ ಕಾರ್ಯಕರ್ತರು ಪೊಲೀಸ್ ಠಾಣೆಯೆದುರು ಇಂದು ಬೆಳಿಗ್ಗೆಯಿಂದಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಕೂಡಾ ಪತ್ರಕರ್ತರನ್ನು ತಡೆಯಲು ಠಾಣೆಯ ಸುತ್ತ ಬ್ಯಾರೀಕೇಡ್ ನಿರ್ಮಿಸಿದ್ದರು.

ಶಾಸಕನ ಪುತ್ರನಿಗೆ ಈ ರೀತಿ ರಾಜಾತಿಥ್ಯ ನೀಡಿರುವ ಪೊಲೀಸರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಸಾಮಾನ್ಯ ವ್ಯಕ್ತಿಯಾಗಿದ್ದರೆ ಪೊಲೀಸರು ಇದೇ ರೀತಿ ನಡೆದುಕೊಳ್ಳುತ್ತಿದ್ದರ ಎಂಬ ಮಾತು ಕೇಳಿ ಬರುತ್ತಿದೆ.

 

click me!