ಕೃಷ್ಣ ಜನ್ಮಾಷ್ಟಮಿ; ಇಸ್ಕಾನ್'ನಲ್ಲಿ ಎರಡು ದಿನ ವಿಶೇಷ ಸೇವೆಗಳು

Published : Aug 14, 2017, 12:52 PM ISTUpdated : Apr 11, 2018, 01:01 PM IST
ಕೃಷ್ಣ ಜನ್ಮಾಷ್ಟಮಿ; ಇಸ್ಕಾನ್'ನಲ್ಲಿ ಎರಡು ದಿನ ವಿಶೇಷ ಸೇವೆಗಳು

ಸಾರಾಂಶ

ಇಂದು ವಿಶೇಷ ಅಭಿಷೇಕ, ಮಧ್ಯರಾತ್ರಿ 12 ಕ್ಕೆ ಆರತಿ, ನೈವೇದ್ಯ ಸೇವೆ, ಪುಷ್ಪಾಂಜಲಿ ಸೇವೆ ಸೇರಿದಂತೆ ವಿಶೇಷ ಸೇವೆಗಳು ನಡೆಯಲಿವೆ. ನಾಳೆ ಮಹಾ ಅಭಿಷೇಕ, 108 ಬಗೆಯ ತಿಂಡಿಗಳ ಪ್ರದರ್ಶನ ನಡೆಯಲಿದೆ. ಮಧ್ಯರಾತ್ರಿ 12 ಗಂಟೆಗೆ ಮಹಾ ಮಂಗಳಾರತಿ, ಭಕ್ತಿಗೀತೆ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೆ ಶ್ರೀ ಕೃಷ್ಣನ ವೇಷಭೂಷಣ ಧರಿಸಿ ಮಕ್ಕಳು ಸಂಭ್ರಮಿಸಲಿದ್ದಾರೆ.

ಬೆಂಗಳೂರು(ಆ. 14): ನಾಡಿನೆಲ್ಲಡೆ ಇಂದು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಹರೇ ರಾಮ ಹರೇ ಕೃಷ್ಣ ಮಂತ್ರ ಪಠಣದ ನಿನಾದದೊಂದಿಗೆ ಇಂದು ಇಸ್ಕಾನ್ ಆವರಣದಲ್ಲಿ ಶ್ರೀಕೃಷ್ಣನ ಹುಟ್ಟುಹಬ್ಬದ ಸಂಭ್ರಮ ಮನೆಮಾಡಲಿದೆ. ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಶ್ರೀ ಕೃಷ್ಣನ ದೇವಾಲಯದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ. ಜನ್ಮಾಷ್ಟಮಿ ಅಂಗವಾಗಿ ನಗರದ ಇಸ್ಕಾನ್'ನ ಶ್ರೀ ರಾಧಾಕೃಷ್ಣ ಮಂದಿರದಲ್ಲಿ ಅಭಿಷೇಕ ಸೇರಿದಂತೆ ಎರಡು ದಿನಗಳ ಕಾಲ ವಿವಿಧ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಂದು ವಿಶೇಷ ಅಭಿಷೇಕ, ಮಧ್ಯರಾತ್ರಿ 12 ಕ್ಕೆ ಆರತಿ, ನೈವೇದ್ಯ ಸೇವೆ, ಪುಷ್ಪಾಂಜಲಿ ಸೇವೆ ಸೇರಿದಂತೆ ವಿಶೇಷ ಸೇವೆಗಳು ನಡೆಯಲಿವೆ. ನಾಳೆ ಮಹಾ ಅಭಿಷೇಕ, 108 ಬಗೆಯ ತಿಂಡಿಗಳ ಪ್ರದರ್ಶನ ನಡೆಯಲಿದೆ. ಮಧ್ಯರಾತ್ರಿ 12 ಗಂಟೆಗೆ ಮಹಾ ಮಂಗಳಾರತಿ, ಭಕ್ತಿಗೀತೆ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೆ ಶ್ರೀ ಕೃಷ್ಣನ ವೇಷಭೂಷಣ ಧರಿಸಿ ಮಕ್ಕಳು ಸಂಭ್ರಮಿಸಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ 20 ಲಕ್ಷ ಅಕ್ರಮ ವಲಸಿಗರು? ಪೊಲೀಸರ ಲೆಕ್ಕದಲ್ಲಿ ಕೇವಲ 485 ಮಂದಿ!
india Latest News Live: ನ್ಯಾಷನಲ್‌ ಹೆರಾಲ್ಡ್ ಕೇಸು: ಹೈಕೋರ್ಟ್‌ ಮೊರೆ ಹೋದ ಜಾರಿ ನಿರ್ದೇಶನಾಲಯ