ಲೋಕಸಭೆ ಬಾವಿಗಿಳಿದರೆ ಸಂಸದರು ಅಮಾನತು?

Published : Dec 23, 2018, 12:52 PM IST
ಲೋಕಸಭೆ ಬಾವಿಗಿಳಿದರೆ ಸಂಸದರು ಅಮಾನತು?

ಸಾರಾಂಶ

ಲೋಕಸಭೆ ಬಾವಿಗಿಳಿದ ಸಂಸದರು ತನ್ನಿಂತಾನೇ ಸಸ್ಪೆಂಡ್‌ ಆಗುವಂಥ ನಿಯಮ ಜಾರಿಗೆ ಯತ್ನ

ನವದೆಹಲಿ[ಡಿ.23]: ಲೋಕಸಭೆ ಬಾವಿಗಿಳಿದು, ಘೋಷಣೆ ಕೂಗಿ ಪ್ರತಿಭಟನೆ ನಡೆಸುವ ಮೂಲಕ ಸುಗಮ ಕಲಾಪಕ್ಕೆ ಅಡ್ಡಿಪಡಿಸುವ ಸಂಸದರನ್ನು ಸದನದಿಂದಲೇ ಹೊರಹಾಕುವ ಪ್ರಯತ್ನವೊಂದು ಆರಂಭವಾಗಿದೆ. ಪದೇಪದೇ ಪ್ರತಿಭಟನೆ ನಡೆಸುವ ಸಂಸದರನ್ನು ತನ್ನಿಂತಾನೆ ಅಮಾನತುಗೊಳಿಸುವ ನಿಯಮವೊಂದನ್ನು ಜಾರಿಗೆ ತರಲು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಒಲವು ತೋರಿದ್ದು, ಶುಕ್ರವಾರದ ನಿಯಮಾವಳಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ.

‘ಯಾವುದೇ ಸದಸ್ಯ ಸದನದ ಬಾವಿಗೆ ಇಳಿದರೆ ಅಥವಾ ಘೋಷಣೆಗಳನ್ನು ಕೂಗುವ ಮೂಲಕ ಕಲಾಪಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದರೆ ಅಂತಹ ಸದಸ್ಯರ ಹೆಸರನ್ನು ಸ್ಪೀಕರ್‌ ಹೇಳಬೇಕು. ಆಗ ಸದಸ್ಯರು ಮುಂದಿನ ಐದು ದಿನದ ಕಲಾಪಗಳು ಅಥವಾ ಅಧಿವೇಶನದ ಉಳಿದ ಅವಧಿಗೆ ತನ್ನಿಂತಾನೆ ಅಮಾನತುಗೊಳ್ಳುತ್ತಾರೆ. ಅಂತಹ ಅಮಾನತನ್ನು ಸದನ ಯಾವಾಗ ಬೇಕಾದರೂ ರದ್ದುಗೊಳಿಸಬಹುದು’ ಎಂದು ನಿಯಮ 374ಎ (1) ಹೇಳುತ್ತದೆ. ‘ಸ್ಪೀಕರ್‌ ಹೇಳಿದರೆ’ ಎಂಬ ಅಂಶವನ್ನು ಆ ನಿಯಮದಿಂದ ತೆಗೆಯುವ ಮೂಲಕ ಸದಸ್ಯರು ಧರಣಿಗಿಳಿದರೆ ತನ್ನಿಂತಾನೇ ಅಮಾನತುಗೊಳ್ಳುವಂತೆ ಮಾಡಬೇಕು ಎಂಬುದು ಸ್ಪೀಕರ್‌ ಅವರ ಅಭಿಪ್ರಾಯವಾಗಿದೆ. ಛತ್ತೀಸ್‌ಗಢ ವಿಧಾನಸಭೆಯಲ್ಲಿ ಈಗಾಗಲೇ ಇಂತಹದ್ದೊಂದು ನಿಯಮವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಸೋನಿಯಾ ಗಾಂಧಿಗೆ ಕೇರಳ ಚುನಾವಣೆಯಲ್ಲಿ ಸೋಲು
ಶೇ.100ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಇರುವ ಕೇರಳದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು