ಸೆಹ್ವಾಗ್ ಮೂರ್ಖನಂತೆ ಮಾತನಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಗಂಗೂಲಿ ಹೇಳಿಕೆ ನೀಡಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು
ಕೋಲ್ಕತಾ(ಸೆ.17): ಸೆಹ್ವಾಗ್ ಮೂರ್ಖನಂತೆ ಮಾತನಾಡಿದ್ದಾರೆ ಎಂದಿದ್ದ ಸೌರವ್ ಗಂಗೂಲಿ ಯು ಟರ್ನ್ ಹೊಡೆದಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು ನಾನು ಈ ರೀತಿ ಹೇಳಿಕೆಯೇ ನೀಡಿಲ್ಲ ಎಂದಿದ್ದಾರೆ. ಕೋಚ್ ಆಯ್ಕೆ ಸಂಬಂಧ ಆಯ್ಕೆದಾರರ ಜತೆ ನಾನು ‘ಸೆಟ್ಟಿಂಗ್’ ಮಾಡಿಕೊಂಡಿರಲಿಲ್ಲ. ಆದ ಕಾರಣ ಹುದ್ದೆ ಕೈತಪ್ಪಿತು ಎಂದು ಸೆಹ್ವಾಗ್ ಟಿವಿ ಸಂದರ್ಶನದಲ್ಲಿ ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಗಂಗೂಲಿ ಸೆಹ್ವಾಗ್ ಮೂರ್ಖನಂತೆ ಮಾತನಾಡಿದ್ದಾರೆ' ಎಂದಿದ್ದರು. ಈ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರು ಅವರು, ‘ಸೆಹ್ವಾಗ್ ಕುರಿತು ನಾನು ಆ ರೀತಿ ಮಾತಾಡಿಲ್ಲ. ನಾವಿಬ್ಬರು ಒಳ್ಳೆಯ ಸ್ನೇಹಿತರು. ಶೀಘ್ರದಲ್ಲೇ ಅವರೊಂದಿಗೆ ಮಾತನಾಡುತ್ತೇನೆ’ ಎಂದಿದ್ದಾರೆ.