ಚುನಾವಣೆಗೆ ಸ್ಪರ್ಧೆ:ರಾಮಲಿಂಗಾರೆಡ್ಡಿ ಪುತ್ರಿ

Published : Jan 03, 2018, 10:37 PM ISTUpdated : Apr 11, 2018, 12:42 PM IST
ಚುನಾವಣೆಗೆ ಸ್ಪರ್ಧೆ:ರಾಮಲಿಂಗಾರೆಡ್ಡಿ ಪುತ್ರಿ

ಸಾರಾಂಶ

ಜಯನಗರ ಕ್ಷೇತ್ರದಲ್ಲಿ ಸತತ ಕೆಲ ತಿಂಗಳಿಂದ ಪ್ರಚಾರ ಮತ್ತು ಸಂಚಾರ ಪ್ರಾರಂಭಿಸಿದ್ದು, ಜನತೆಯು ಉತ್ತಮವಾಗಿ ಸ್ಪಂದನೆ ನೀಡುತ್ತಿದ್ದಾರೆ.

ಆನೇಕಲ್(ಡಿ.03): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಜಯನಗರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ತಿಳಿಸಿದ್ದಾರೆ.

ಕಾರ್ಯ'ಕ್ರಮವೊಂದರಲ್ಲಿ ಮಾತನಾಡಿ, ಜಯನಗರ ಕ್ಷೇತ್ರದಲ್ಲಿ ಮಾಡಿದ ಹಲವಾರು ಮಾದರಿ ಕಾರ್ಯಕ್ರಮಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಾಡಿರುವ ಅನನ್ಯ ಸೇವೆಯೇ ನನಗೆ ಶ್ರೀರಕ್ಷೆಯಾಗಲಿದೆ. ಜಯನಗರ ಕ್ಷೇತ್ರದಲ್ಲಿ ಸತತ ಕೆಲ ತಿಂಗಳಿಂದ ಪ್ರಚಾರ ಮತ್ತು ಸಂಚಾರ ಪ್ರಾರಂಭಿಸಿದ್ದು, ಜನತೆಯು ಉತ್ತಮವಾಗಿ ಸ್ಪಂದನೆ ನೀಡುತ್ತಿದ್ದಾರೆ. ನನಗಂತೂ ಈ ಕ್ಷೇತ್ರದಲ್ಲಿನ ಜನತೆಯ ಆಶೀರ್ವಾದ ಪಡೆದು ಗೆಲ್ಲುವ ಮೂಲಕ ಉತ್ತಮ ಸೇವೆ ಮಾಡುವುದಾಗಿ ಭರವಸೆಯಿಂದ ನುಡಿದರು.

ಸತತ ಹಲವು ವರ್ಷಗಳಿಂದ ತಂದೆಯವರ ಜೊತೆ ಸಾಮಾಜಿಕ ಸೇವಾ ಕೆಲಸಗಳಲ್ಲಿ ಪಾಲ್ಗೊಂಡಿದ್ದೆ. ರಾಜಕಾರಣ ನನ್ನ ರಕ್ತದಲ್ಲಿ ಹರಿದು ಬಂದಿದೆ. ಮಹಿಳಾ ಪ್ರತಿನಿಧಿಯಾಗಿ ವಿದ್ಯಾವಂತ ಸಮುದಾಯ ಹಾಗೂ ಬಡ ವರ್ಗದ ಜನತೆಯ ಜೊತೆ ಕೆಲಸ ಮಾಡಿದ ತೃಪ್ತಿ ಇದೆ. ಸೇವಾ ವಲಯವನ್ನು ವಿಸ್ತರಿಸುವ ಸಲುವಾಗಿ ನನ್ನ ಆಸೆಯನ್ನು ವ್ಯಕ್ತಪಡಿಸಿದಾಗ ನನ್ನ ತಂದೆಯವರು ಬೆನ್ನು ತಟ್ಟಿ ಪ್ರೋತ್ಸಾಹ ನೀಡುವುದಾಗಿ ಹರಸಿದ್ದಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ