ಶೀಘ್ರದಲ್ಲೇ ರಾಜ್ಯದ ಜನತೆಗೆ 'ಕರೆಂಟ್' ಶಾಕಿಂಗ್ ನ್ಯೂಸ್!

By Suvarna Web DeskFirst Published Feb 20, 2017, 4:30 PM IST
Highlights

ದರಏರಿಕೆಮಾಡುವಸಂಬಂಧಈಗಾಗಲೇಕರ್ನಾಟಕವಿದ್ಯುಚ್ಛಕ್ತಿನಿಯಂತ್ರಣಆಯೋಗದಿಂದರಾಜ್ಯಸರ್ಕಾರಕ್ಕೆಪ್ರಸ್ತಾವನೆಕೂಡಾಸಲ್ಲಿಕೆಯಾಗಿದೆ.

ಬೆಂಗಳೂರು(ಫೆ.20): ಬೇಸಿಗೆಯ ಬಿಸಿ ಏರುತ್ತಿರುವುದರ ಜೊತೆಯಲ್ಲಿಯೇ ರಾಜ್ಯದ ಜನತೆಗೆ ಮತ್ತೆ ಶಾಕಿಂಗ್​  ನ್ಯೂಸ್​ ಕಾದಿದೆ. ಮಾರ್ಚ್ ನಿಂದ ವಿದ್ಯುತ್​ ಬಿಲ್​ ಏರಿಕೆಯಾಗುವ ಸಾಧ್ಯತೆಗಳಿವೆ. ದರ ಏರಿಕೆ ಮಾಡುವ ಸಂಬಂಧ ಈಗಾಗಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕೂಡಾ ಸಲ್ಲಿಕೆಯಾಗಿದೆ. ಪ್ರತಿ ಯುನಿಟ್​ಗೆ 1. 48 ಪೈಸೆ ಏರಿಕೆ ಮಾಡುವ ಬಗ್ಗೆ ಕೆಇಆರ್​ಸಿ ಪ್ರಸ್ತಾವನೆ ಸಲ್ಲಿಸಿದೆ. ಈ ಸಂಬಂಧ ಇಂದು ಕೆಇಆರ್​ಸಿ ಅಧ್ತಕ್ಷ ಶಂಕರಲಿಂಗೇಗೌಡ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಕೆಇಆರ್​ಸಿ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದರೆ ಮುಂದಿನ ತಿಂಗಳಿನಿಂದ ದರ ಏರಿಕೆಯಾಗಲಿದೆ. 

click me!