ನೋಟು ನಿಷೇಧ: ಜನರ ಹಕ್ಕಿಗಾಗಿ ಹೋರಾಡಲು ಸಂಸದರಿಗೆ ಸೋನಿಯಾ ಕರೆ

Published : Nov 16, 2016, 11:24 AM ISTUpdated : Apr 11, 2018, 01:12 PM IST
ನೋಟು ನಿಷೇಧ: ಜನರ ಹಕ್ಕಿಗಾಗಿ ಹೋರಾಡಲು ಸಂಸದರಿಗೆ ಸೋನಿಯಾ ಕರೆ

ಸಾರಾಂಶ

ನೋಟುಗಳ ಅಪಮೌಲ್ಯೀಕರಣ ಮತ್ತು ಸರಕು ಹಾಗೂ ಸೇವಾ ತೆರಿಗೆ (ಜಿಎಸ್’ಟಿ)ಯ ಅಸಮರ್ಪಕ ತೆರಿಗೆ ದರವನ್ನು ಕೂಡಾ ಪಕ್ಷವು ವಿರೋಧಿಸಲಿದೆ.

ನವದೆಹಹಲಿ (ನ.16):  ಸರ್ಕಾರದ ನೋಟುಗಳ ಅಪಮೌಲ್ಯೀಕರಣ ಕ್ರಮದಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರ ಹಕ್ಕಿಗಾಗಿ ಹೋರಾಡುವಂತೆ ಕಾಂಗ್ರೆಸ್ ಅಧಕ್ಷೆ ಸೋನಿಯಾ ಗಾಂಧಿ ಸಂಸದರಿಗೆ ಕರೆಕೊಟ್ಟಿದ್ದಾರೆ.

10, ಜನಪಥದಲ್ಲಿ ಪಕ್ಷದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸೋನಿಯಾ ಗಾಂಧಿ, ಚಳಿಗಾಲ ಅಧಿವೇಶನದಲ್ಲಿ ಪಕ್ಷದ ಕಾರ್ಯನೀತಿ ಏನಾಗಿರಬೇಕು ಎಂಬುವುದನ್ನು ತನ್ನ ಪಕ್ಷದ ಸಂಸದರೊಂದಿಗೆ ಚರ್ಚಿಸಿದರು.

ನೋಟುಗಳ ಅಪಮೌಲ್ಯೀಕರಣ ಮತ್ತು ಸರಕು ಹಾಗೂ ಸೇವಾ ತೆರಿಗೆ (ಜಿಎಸ್’ಟಿ)ಯ ಅಸಮರ್ಪಕ ತೆರಿಗೆ ದರವನ್ನು ಕೂಡಾ ಪಕ್ಷವು ವಿರೋಧಿಸಲಿದೆ.

ನೋಟುಗಳ ಅಪಮೌಲ್ಯೀಕರಣವನ್ನು ವಿರೋಧಿಸಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಇಂದು ರಾಷ್ಟ್ರಪತಿ ಭವನಕ್ಕೆ ನಡೆಸಿರುವ ಪಾದಯಾತ್ರೆಯನ್ನು ಬೆಂಬಲಿಸದಿರಲು ಕಾಂಗ್ರೆಸ್ ನಿರ್ಧರಿಸಿತ್ತು. ಆ ವಿಷಯವನ್ನು  ಮೊದಲು ಸಂಸತ್ತಿನಲ್ಲಿ ಚರ್ಚಿಸಲು ಕಾಂಗ್ರೆಸ್ ತೀರ್ಮಾನಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?