ಗಟ್ಟಿಯಾದ ಜ್ಯೂಸ್ ಒಡೆಯಲ್ಲ: ದೇಶಸೇವೆ ಮಾತ್ರ ನಿಲ್ಲಲ್ಲ!

Published : Jun 08, 2019, 09:58 PM IST
ಗಟ್ಟಿಯಾದ ಜ್ಯೂಸ್ ಒಡೆಯಲ್ಲ: ದೇಶಸೇವೆ ಮಾತ್ರ ನಿಲ್ಲಲ್ಲ!

ಸಾರಾಂಶ

ಕೊರೆಯುವ ಚಳಿಗೆ ಎದೆಯೊಡ್ಡಿದ ಧೀರ ಸೈನಿಕರು| ಸಿಯಾಚಿನ್'ನಲ್ಲಿ ಗಡಿ ಕಾಯುವ ಯೋಧನ ಜೀವನ ಹೇಗಿರುತ್ತದೆ?| ಸುತ್ತಿಗೆಯಿಂದಲೂ ಒಡೆಯಲು ಬಾರದ ಗಟ್ಟಿಯಾದ ಜ್ಯೂಸ್| ತೀವ್ರ ಚಳಿಗೆ ಗಟ್ಟಿಯಾಗಿರುವ ಮೊಟ್ಟೆ ಒಡೆಯುವುದಿಲ್ಲ| ಗಟ್ಟಿಯಾದ ಜ್ಯೂಸ್ ಒಡೆಯಲು ಪ್ರಯತ್ನಿಸುತ್ತಿರುವ ಯೋಧರ ವಿಡಿಯೋ ವೈರಲ್|

ಸಿಯಾಚಿನ್(ಜೂ.08): ದೇಶದ ಗಡಿ ರಕ್ಷಿಸುವ ಅದಮ್ಯ ಬಯಕೆ ಅವರನ್ನು ಎಲ್ಲ ಕಷ್ಟಗಳನ್ನು ಸಹಿಸಿಕೊಳ್ಳುವಂತೆ ಮಾಡುತ್ತದೆ. ಕೊರೆಯುವ ಚಳಿಗೆ ಮೈಯೊಡ್ಡಿ ನಿಲ್ಲುವ ನಮ್ಮ ಧೀರ ಯೋಧ, ಮಾತೃಭೂಮಿಗಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುತ್ತಾನೆ.

ಅದರಂತೆ ವಿಶ್ವದ ಅತ್ಯಂತ ಎತ್ತರದ ಭೂಮಿ ಸಿಯಾಚಿನ್'ನಲ್ಲಿ ಭಾರತೀಯ ಸೇನೆಯ ಯೋಧ ಅದೆಂತಾ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ತಾಯಿ ಭಾರತಾಂಬೆಯ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾನೆ ಎಂಬುದರ ಕುರಿತಾದ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. 

ಸಿಯಾಚಿನ್ ಗಡಿ ಕಾಯುತ್ತಿರುವ ಯೋಧರಿಗಾಗಿ ಕೊಡಲಾದ ಜ್ಯೂಸ್ ತೀವ್ರ ಚಳಿಒಗೆ ಗಟ್ಟಿಯಾಗಿದ್ದು, ಅದನ್ನು ಒಡೆದು ತಿನ್ನಲು ಸಹ ಆಗದ ಪರಿಸ್ಥಿತಿ ಯಲ್ಲೂ ನಗು ಮೊಗ ಹೊತ್ತು ದೇಶಸೇವೆ ಮಾಡುತ್ತಿದ್ದಾರೆ.

ವಿಡಿಯೋದಲ್ಲಿ ಯೋಧರು ಗಟ್ಟಿಯಾಗಿರುವ ಜ್ಯೂಸ್ ನ್ನು ಸುತ್ತಿಗೆಯಿಂದ ಒಡೆಯಲು ಪ್ರಯತ್ನಿಸುತ್ತಿರುವ ದೃಶ್ಯ ಸೆರೆಯಾಗಿದೆ. ಅದರಂತೆ ಚಳಿಯಿಂದಾಗಿ ಮೊಟ್ಟೆ ಕೂಡ ಗಟ್ಟಿಗೊಂಡಿದ್ದು, ಅದನ್ನೂ ಕೂಡ ಒಡೆಯಲು ಸಾಧ್ಯವಾಗುತ್ತಿಲ್ಲ.

ಮೈನಸ್ 40 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ತಾಪಮಾನ ಹೊಂದಿರುವ ಸಿಯಾಚಿನ್'ನಲ್ಲಿ ಎಲ್ಲ ಕಷ್ಟಗಳಿಗೆ ಎದೆಯೊಡ್ಡಿ ದೇಶ ರಕ್ಷಣೆಯಲ್ಲಿ ನಿರತರಾಗಿರುವ ನಮ್ಮ ವೀರ ಸೈನಿಕರಿಗೆ ಪ್ರತಿಯೊಬ್ಬ ಭಾರತೀಯ ಸಲಾಂ ಹೇಳಲೇಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಸಿದ್ದರಾಮಯ್ಯರಿಂದ ರಾಜ್ಯದ ದಲಿತರ ಸರ್ವನಾಶ: ಮಾಜಿ ಸಂಸದ ಪ್ರತಾಪ್ ಸಿಂಹ
Karnataka News Live:4 ವರ್ಷಗಳ ಬಳಿಕ ಕೊನೆಗೂ ಜಿಪಂ, ತಾಪಂಗಳಿಗೆ ಏಪ್ರಿಲಲ್ಲಿ ಎಲೆಕ್ಷನ್