
ಶ್ರೀನಗರ(ಸೆ.25): ಭಾರತದ ಪಾಲಿಗೆ ಇಂದು ನಿಜಕ್ಕೂ ಬ್ಲ್ಯಾಕ್ ಡೇ. ಕಾರಣ ೨೦೧೬ ರಲ್ಲಿ ನಡೆದ ಭಾರತೀಯ ಸೇನೆಯ ಸರ್ಜಿಕಲ್ ಸ್ಟ್ರೈಕ್ ಆಪರೇಷನ್ ನಲ್ಲಿ ಪಾಲ್ಗೊಂಡಿದ್ದ ವೀರ ಯೋಧ ಲಾನ್ಸ್ ನಾಯಕ್ ಸಂದೀಪ್ ಸಿಂಗ್ ಹುತಾತ್ಮರಾಗಿದ್ದಾರೆ.
ಇಂದು ಭಯೋತ್ಪಾದಕರೊಡನೆ ನಡೆದ ಎನ್ ಕೌಂಟರ್ ನಲ್ಲಿ ಸಂದೀಪ್ ಸಿಂಗ್ ಹುತಾತ್ಮರಾದರು ಎಂದು ಸೇನಾ ಮೂಲಗಳು ತಿಳಿಸಿವೆ. ಆದರೆ ಕೊನೆಯುಸಿರೆಳುವುದಕ್ಕೂ ಮೊದಲು ಮೂವರು ಭಯೋತ್ಪಾದಕರನ್ನು ಸಂದೀಪ್ ಸಿಂಗ್ ಹೊಡೆದುರುಳಿಸಿದ್ದಾರೆ.
ಇಲ್ಲಿನ ಕುಪ್ವಾರಾ ಬಳಿ ನಡೆದ ಎನ್ ಕೌಂಟರ್ ನಲ್ಲಿ ತಾವೇ ಮುಂದೆ ನಿಂತು ಭಯೋತ್ಪಾದಕರನ್ನು ಮಟ್ಟ ಹಾಕುತ್ತಿದ್ದ ಸಂದೀಪ್, ಕೊಬೆಗೆ ಭಯೋತ್ಪಾದಕರ ಗುಂಡಿಗೆ ಬಲಿಯಾದರು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಮೂಲತಃ ಪಂಜಾಬ್ ನವರಾದ ಸಂದೀಪ್ ಸಿಂಗ್, ಸೇನೆಯ 4 ಪ್ಯಾರಾ ಕಮಾಂಡೋಸ್ ನ ಸದಸ್ಯರಾಗಿದ್ದರು. ಸಂದೀಪ್ ಸಿಂಗ್ ಕೊನೆ ಕ್ಷಣದವರೆಗೂ ಈ ದೇಶದ ರಕ್ಷಣೆಗಾಗಿ ಹೋರಾಡಿದ ಪರಿ ಮುಂದಿನ ಪೀಳಿಗೆಗೆ ಮಾದರಿ ಎಂದು ಸೇನೆ ತನ್ನ ಸಂತಾಪ ಸೂಚನೆಯಲ್ಲಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.