ಹಿಂದುಗಳ ಸಂಖ್ಯೆ ಕಡಿಮೆಯಿರುವ ಸ್ಥಳದಲ್ಲಿ ಸಾಮಾಜಿಕ ಸಾಮರಸ್ಯ ಹಾಳು: ಕೇಂದ್ರ ಸಚಿವರ ವಿವಾದಿತ ಹೇಳಿಕೆ

Published : Feb 04, 2018, 07:39 PM ISTUpdated : Apr 11, 2018, 12:43 PM IST
ಹಿಂದುಗಳ ಸಂಖ್ಯೆ ಕಡಿಮೆಯಿರುವ ಸ್ಥಳದಲ್ಲಿ ಸಾಮಾಜಿಕ ಸಾಮರಸ್ಯ ಹಾಳು: ಕೇಂದ್ರ ಸಚಿವರ ವಿವಾದಿತ ಹೇಳಿಕೆ

ಸಾರಾಂಶ

ನಾದಲ್ಲಿ ಪ್ರತಿ ನಿಮಿಷಕ್ಕೆ 11 ಮಂದಿ ಜನಿಸಿದರೆ ಭಾರತದಲ್ಲಿ 29 ಮಂದಿ ಜನ್ಮತಾಳುತ್ತಿದ್ದಾರೆ. ವೀಶ್ವದಲ್ಲೇ ಭಾರತದ ಜನಸಂಖ್ಯೆ ಶೇ.18ರಷ್ಟಿದೆ

ನವದೆಹಲಿ(ಫೆ.04): ಎಲ್ಲಿಲ್ಲಿ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತದೆಯೋ ಆ ಸ್ಥಳಗಳಲ್ಲಿ ಸಾಮಾಜಿಕ ಸಾಮರಸ್ಯ ಕದಡುತ್ತದೆ ಎಂದು  ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರಿಂದ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಅವರು,  ಜನಸಂಖ್ಯೆಯನ್ನು ನಿಯಂತ್ರಿಸಲಾಗದಿದ್ದರೆ ಭವಿಷ್ಯದಲ್ಲಿ 10ರಲ್ಲಿ ಓರ್ವನಿಗೆ ಕುಡಿಯಲು ನೀರು ಸಿಗುವುದಿಲ್ಲ 'ಎಂದು ವಿಶ್ವಸಂಸ್ಥೆ ಇತ್ತೀಚಿಗಷ್ಟೆ ಎಚ್ಚರಿಕೆ ನೀಡಿತ್ತು. ಸಾಮಾಜಿಕ ಸಾಮರಸ್ಯ ಹಾಗೂ ಅಭಿವೃದ್ಧಿಗೆ ತೊಡಕಾಗಲು ಹಿಂದುಗಳ ಸಂಖ್ಯೆ ಕಡಿಮೆಯಾಗುವುದು ಪ್ರಮುಖ ಕಾರಣ' ಎಂದಿದ್ದಾರೆ.

ಏರುತ್ತಿರುವ ಜನಸಂಖ್ಯೆ ನಿಮ್ಮ ಬದುಕು ಹಾಗೂ ಶಾಂತಿಗೆ ಭಂಗ ನೀಡುತ್ತದೆ. ಅದೇ ರೀತಿ ಅಭಿವೃದ್ಧಿ ಹಾಗೂ ಸಾಮಾಜಿಕ ಸಾಮರಸ್ಯಕ್ಕೂ ತೊಡಕಾಗುತ್ತದೆ. ಚೀನಾದಲ್ಲಿ ಪ್ರತಿ ನಿಮಿಷಕ್ಕೆ 11 ಮಂದಿ ಜನಿಸಿದರೆ ಭಾರತದಲ್ಲಿ 29 ಮಂದಿ ಜನ್ಮತಾಳುತ್ತಿದ್ದಾರೆ. ವೀಶ್ವದಲ್ಲೇ ಭಾರತದ ಜನಸಂಖ್ಯೆ ಶೇ.18ರಷ್ಟಿದೆ'ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಗಿರಿರಾಜ್ ಸಿಂಗ್ ಅವರು ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಕೆಲವು ತಿಂಗಳ ಹಿಂದೆ ಮುಸ್ಲಿಂಮರು ಬದುಕುತ್ತಿರುವುದು ರಾಮಜನ್ಮಭೂಮಿ ಭಾರತದಲ್ಲಿ ವಿನಃ ಬಾಬರ್ ಜನ್ಮಭೂಮಿಯಲ್ಲ' ಎಂದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗರ್ಭಧರಿಸಿ 9 ತಿಂಗಳು ಪೂರೈಸಿದ ಹಸುವಿಗೆ ಸೀಮಂತ ಮಾಡಿದ ಮಂಡ್ಯ ರೈತ
ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌