ಸಾವನ್ನೇ ಗೆದ್ದು ಬಂದ ಉರಗ ತಜ್ಞ!

By Internet DeskFirst Published Sep 26, 2016, 7:29 PM IST
Highlights

ನಾಗರಹಾವು ಕಚ್ಚಿ ಆಸ್ಪತ್ರೆಗೆ ದಾಖಲಾಗಿದ್ದ ಶಿವಮೊಗ್ಗದ ಉರಗ ತಜ್ಞ ಸ್ನೇಕ್ ಕಿರಣ್ಗುಣಮುಖರಾಗಿದ್ದಾರೆ.

ಶಿವಮೊಗ್ಗ ( ಸೆ.27): ನಾಗರಹಾವು ಕಚ್ಚಿ ಆಸ್ಪತ್ರೆಗೆ ದಾಖಲಾಗಿದ್ದ ಶಿವಮೊಗ್ಗದ ಉರಗ ತಜ್ಞ ಸ್ನೇಕ್ ಕಿರಣ್​ ಗುಣಮುಖರಾಗಿದ್ದಾರೆ. ಸಾವಿನ ದವಡೆಯಿಂದ ಮೂರನೇ ಬಾರಿಯೂ ಪಾರಾಗಿದ್ದಾರೆ.

 

ಕಳೆದ ಹಲವು ದಿನಗಳ ಹಿಂದೆ ಹಾವು ಹಿಡಿಯಲು ಹೋಗಿ ನಾಗರಹಾವಿನಿಂದು ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಉರಗ ತಜ್ಞ ಸ್ನೇಕ್ ಕಿರಣ್ ಗುಣಮುಖರಾಗಿದ್ದಾರೆ. ಶಿವಮೊಗ್ಗ ನಗರದ ಕೋಟೆ ರಸ್ತೆಯಲ್ಲಿ ನಾಗರಾಜ್ ಅನ್ನೋರ ಮನೆಯಲ್ಲಿ ಕಿರಣ್ ಗೆ ನಾಗರಹಾವು ಕಚ್ಚಿತ್ತು. ತಕ್ಷಣವೇ ನಂಜಪ್ಪ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸಾ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಇದುವರೆಗೆ ಸ್ನೇಕ್ ಕಿರಣ್ 10 ಸಾವಿರಕ್ಕೂ ಹೆಚ್ಚು ಹಾವುಗಳನ್ನ ಹಿಡಿದಿದ್ದರು. ಅದ್ರಲ್ಲೂ ಘಟ್ಟ ಪ್ರದೇಶದಲ್ಲಿ ಕಂಡು ಬರೋ ಕಾಳಿಂಗ ಸರ್ಪಗಳನ್ನ ಪಳಗಿಸೋದ್ರಲ್ಲೂ ಇವ್ರು ಎತ್ತಿದ ಕೈ. ಆದ್ರೆ, ಈ ಹಿಂದೆ 2 ಬಾರಿ ಹಾವು ಕಚ್ಚಿದ್ದು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಬಾರಿಯೂ ಸಾವನ್ನ ಗೆದ್ದು ಬಂದಿದ್ದಾರೆ.

ಒಟ್ನಲ್ಲಿ  ಹಾವು ಹಿಡಿಯಲು ಹೋಗಿ ಮೂರನೇ ಬಾರಿ ಹಾವು ಕಚ್ಚಿದರೂ ಬಚಾವ್ ಆಗಿರುವ ಸ್ನೇಕ್ ಕಿರಣ್ ಸಾವನ್ನೇ ಗೆದ್ದು ಬಂದಿದ್ದು ಸಂತಸದ ಸಂಗತಿ. ಇದು ಶಿವಮೊಗ್ಗ ಜನರಲ್ಲಿ ಸಂತಸ ತರಿಸಿದ್ದು ಎಚ್ಚರಿಕೆ ವಹಿಸಲಿ ಅನ್ನೋ ಮಾತುಗಳೂ ಕೇಳಿ ಬರ್ತಿವೆ.

click me!